ಮಂಡ್ಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜ.1ರಂದು ಸಂಜೆ 5 ಗಂಟೆಗೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಾದಿ ಪ್ರೊ.ಡಾ.ಷಣ್ಮುಗಂ ಉಪನ್ಯಾಸ ನಡೆಸಿಕೊಡಲಿದ್ದಾರೆ.
ಪೇಶ್ವೆ ಎರಡನೇ ಬಾಜಿರಾಯನ ಅಮಾನವೀಯ, ಅವಮಾನಕರ ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ದಂಗೆ ಎದ್ದ 500 ಮಂದಿ ಮಹಾರ್ ಸೈನಿಕರು ಬಾಜಿರಾಯನ 28,000 ಸೈನಿಕರೊಂದಿಗೆ ತಮ್ಮ ಆತ್ಮ ಗೌರವಕ್ಕಾಗಿ ಹೋರಾಡಿ ವಿಜಯ ಸಾಧಿಸಿದ 1818 ಜನವರಿ 1ರ ವಿಜಯದ ಸಂಕೇತವಾಗಿ ಪ್ರತಿವರ್ಷ ಜ.1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರ್ ಅನುಯಾಯಿಗಳು ಆಗಮಿಸಬೇಕೆಂದು ಸಮಿತಿಯ ಮುಖಂಡ, ವಕೀಲ ಸುಂಡಹಳ್ಳಿ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.