ಮಂಡ್ಯ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಾವು ಮಂಡ್ಯ ತಾಲ್ಲೂಕಿನ ಮಂಗಲ, ಸಂತೆಕಸಲಗೆರೆ, ಬೇವಿನಹಳ್ಳಿ, ಇಂಡುವಾಳು, ಯಲಿಯೂರು, ತೂಬಿನಕೆರೆ ಮತ್ತು ಮಂಡ್ಯ ಗ್ರಾಮಾಂತರ (ಚಿಕ್ಕ ಮಂಡ್ಯ) ಪಂಚಾಯಿತಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಬೇವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಾಮೂಹಿಕ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಸಾರ್ವಜನಿಕರಿಗೆ ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಜವಾಬ್ಧಾರಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆನುದ ವತಿಯಿಂದ ಅರಿವು ಮೂಡಿಸಲಾಯಿತು.
ಜಾಥಾ ಸಾಗುವ ದಾರಿಯುದ್ದಕ್ಕೂ ಕಲಾ ತಂಡ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಭಾಗವಹಿಸಿ ಜಾಥಾಕ್ಕೆ ಮೆರುಗು ತಂದವು. ಇದೇ ಸಂದರ್ಭದಲ್ಲಿ ‘ಸಹಿ ಅಭಿಯಾನ’ವನ್ನು ಏರ್ಪಡಿಸಲಾಯಿತು.