ಜನಸಾಮಾನ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಸಾಮಾಜಿಕ ಪಿಡುಗುಗಳ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.
ಮಂಡ್ಯ ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳು ಜಿಲ್ಲೆಯ ಹೆಸರಿಗೆ ಕಳಂಕ ತರುತ್ತವೆ. ಇಂತಹ ಅನ್ಯಾಯಗಳು ಕಂಡೊಡನೆ ತಮ್ಮ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿ, ಇವುಗಳ ನಿಗ್ರಹಕ್ಕೆ ಸಹಕಾರ ನೀಡಬೇಕೆಂದರು.
ಸಾರ್ವಜನಿಕರ ಹಿತ ಕಾಪಾಡುವ ಹೊಣೆಗಾರಿಕೆ, ಇತರರಿಗಿಂತ ನಿಮಗೆ ಹೆಚ್ಚಿದ್ದು, ಈ ಹೊಣೆಗಾರಿಕೆ ನಿರ್ವಹಿಸಲು ಮುಂದಾಗಬೇಕು, ನಿಮ್ಮ ದೈನಂದಿನ ಚಟುವಟಿಕೆಗಳು ಹಾಗೂ ಸಂಘಟನೆ ಉದ್ದೇಶದಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಅಸ್ಥೆ ವಹಿಸಿರುವುದು ಶ್ಲಾಘನೀಯವೆಂದರು.
ವೇದಿಕೆಯಲ್ಲಿ ಡಿಹೆಚ್ಓ ಡಾ.ಮೋಹನ್ ಸೇರಿದಂತೆ ಮತ್ತಿತರರಿದ್ದರು.