ವಿಶ್ವ ರೈತಚೇತನ, ರೈತ ನಾಯಕ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರ ರೈತಸಂಘಟನೆ ಮೂಲಕ ನಡೆಸಿದ ರೈತಚಳವಳಿಯ ಘಟನಾವಳಿ ಆಧಾರಿತ ನಾಟಕ “ಡೈರಕ್ಟ್ಆಕ್ಷನ್ ” ಫೆ.10 (ಇಂದು) ಸಂಜೆ 6.30 ಕ್ಕೆ ಮದ್ದೂರಿನ ಪದವಿ ಪೂರ್ವ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯಲಿದೆ.
ಪ್ರೊ ಎಂ.ಡಿ. ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರವು ನಾಟಕ ಆಯೊಜನೆ ಮಾಡಿದ್ದು, ನಟರಾಜ್ ಹುಳಿಯಾರ್ ರಚನೆ ಮಾಡಿದ್ದು, ಕಬ್ಬಡ್ಡಿ ನರೇಂದ್ರ ಬಾಬು ನಿರ್ದೆಶಿಸಿದ್ದಾರೆ. ಚಲನಚಿತ್ರ ನಟ ಸಂಪತ್ ಮೈತ್ರೇಯಾ ಪ್ರೊ.ಎಂಡಿಎನ್ ಪಾತ್ರ ನಿರ್ವಹಿಸುತ್ತಿದ್ದು, ಬೆಂಗಳೂರಿನ ನಗ್ನ ಥಿಯೇಟರ್ ತಂಡದ ಕಲಾವಿದರ ತಂಡ ನಾಟಕ ಪ್ರಸ್ತುತ ಪಡಿಸಲಿದೆ.
ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರನ್ನು ಈ ವೇಳೆ ಸನ್ಮಾನಿಸಲಾಗುತ್ತಿದೆ ಎಂದು ಪ್ರೊ.ಎಂಡಿಎನ್ ರೈತ ಚೈತನ್ಯಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ತಿಳಿಸಿದ್ದಾರೆ.