ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ರೈತ ಸಂಘ ಹಾಗೂ ಸರ್ವೋದಯ ಕರ್ನಾಟಕ ಪಕ್ಷ ಬೆಂಬಲಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು ) ರವರ ಚುನಾವಣೆ ಸಂಬಂಧ ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಈ ದಿನ ಗಾಣಗಾಳು ಗ್ರಾಮ.ಪಂ .ವ್ಯಾಪ್ತಿಯ ಮಾಡಿ ಜಯರಾಮ್ ರವರ ಮನೆಯಲ್ಲಿ ಹಾಗೂ ಚಂದಗಾಲು ಗ್ರಾ.ಪಂ. ವ್ಯಾಪ್ತಿಯ ದೇವರಾಜ್ ಮನೆಯಲ್ಲಿ ಚುನಾವಣೆಯ ಪೂರ್ವಭಾವಿ ಸಭೆ ನಡೆಯಿತು.
ನಂತರ ಮಾತನಾಡಿದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ನನ್ನ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ರೈತ ಸಂಘದವರು ಹಾಗೂ ಎಲ್ಲಾ ಮುಖಂಡರುಗಳಿಗೆ ಮನವಿ ಮಾಡಿದರು. ಎಲ್ಲರೂ ಸಹ ನಮ್ಮ ಪಕ್ಷದ ಬೆಂಬಲಿತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ರವರನ್ನು ದಯವಿಟ್ಟು ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು.
ಹಾಗೂ ಭೂತ ಮಟ್ಟದಲ್ಲಿಯೂ ಪ್ರತಿಯೊಬ್ಬರು ಕಾಂಗ್ರೆಸ್ ಗ್ಯಾರಂಟಿ ಯ ಬಗ್ಗೆ ತಿಳಿಸಿ ,ಕಾಂಗ್ರೆಸ್ ಅಭ್ಯರ್ಥಿಯನ್ನು ಅತ್ಯಧಿಕ ಮತದಿಂದ ಗೆಲ್ಲಿಸಬೇಕು .ಯಾವುದೇ ಭಿನ್ನಾಭಿಪ್ರಾಯಗಳನ್ನು ಮರೆತು ತಾವೆಲ್ಲರೂ ಒಗ್ಗಟ್ಟಾಗಿ ನನ್ನ ಗೆಲುವಿಗೆ ಶ್ರಮಿಸಿದ ಅದೇ ರೀತಿ ತಾವುಗಳು ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಅದ್ಭುತ ಪೂರ್ಣವಾಗಿ ಗೆಲ್ಲಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿ ಬೋಜೆ ಗೌಡ , ಸಿ ಕೆ .ನಾಗರಾಜ್ ,ಪಿ ಕೆ .ನಾಗಣ್ಣ ಮೇಲ್ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉಮೇಶ್, ಎಂ ಬಿ. ಶಂಕ್ರೇಗೌಡ , ಚಂದ್ರಣ್ಣ,ದೇವರಾಜು, ಶಂಕರ್, ಜೋಗಪ್ಪ ,ಕೆ .ಜೋಗಿಗೌಡ, ಆನಂದ, ಶಂಕರೇಗೌಡ, ವಿಜಯ್ ಕುಮಾರ್, ಶಿವಲಿಂಗಯ್ಯ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾ.ಪಂ .ವ್ಯಾಪ್ತಿಯ ಹೊಳಲು, ಮಲ್ನಾಯಕನ ಕಟ್ಟೆ, ಗಾಣದಾಳು, ಚಂದಗಾಲು , ಮೋಡಚಾಕನಹಳ್ಳಿ ಉಳ್ಳೇನಹಳ್ಳಿ ,ದುದ್ದ, ಬೇವುಕಲ್, ಗ್ರಾಮಗಳಲ್ಲಿ ಸಭೆ ನಡೆಯಿತು.