Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಳೆ ಮಿಮ್ಸ್ ಆವರಣದಲ್ಲಿ ‘ಬುದ್ದ ಬೆಳಕು’ ಕಾರ್ಯಕ್ರಮ

ಪರಿಸರ ರೂರಲ್ ಡೆವಲೆಪ್‌ ಮೆಂಟ್ ಸೊಸೈಟಿ ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ ಹಾಗೂ ಮಮತೆಯ ಮಡಿಲು ಇವರ ವತಿಯಿಂದ ಬುದ್ದ ಪೂರ್ಣಿಮೆ ಅಂಗವಾಗಿ ಮೇ 23ರಂದು ಬೆಳಿಗ್ಗೆ 8.30ಗಂಟೆಗೆ ಮಂಡ್ಯನಗರದ ಮಿಮ್ಸ್ (ಜಿಲ್ಲಾಸ್ಪತ್ರೆ)ನ ಹೆರಿಗೆ ವಿಭಾಗದ ಬಳಿ ಬುದ್ಧ ಬೆಳಕು ಕಾರ್ಯಕ್ರಮ ನಡೆಯಲಿದೆ.

ಮಿಮ್ಸ್ ನಿರ್ದೇಶಕ ಡಾ. ಪಿ.ನರಸಿಂಹಮೂರ್ತಿ ಬುದ್ಧ ಭಾವಚಿತ್ರಕ್ಕೆ ಮಷ್ಪಾರ್ಚನೆ ಮಾಡುವರು. ಕವಿ ಕೆ.ಪಿ. ಮೃತ್ಯುಂಜಯ ಬುದ್ದನಿಗೆ ನುಡಿನಮನ ಸಲ್ಲಿಸುವರು. ಮಂಡ್ಯ ನಗರಸಭೆ ಪೌರಾಯುಕ್ತ ಮಂಜುನಾಥ್ ಉಪಸ್ಥಿತರಿರುವರು.

ಸಂತೆಕಸಲಗೆರೆ ಬಸವರಾಜು ಮತ್ತು ತಂಡದವರಿಂದ ಬುದ್ದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪರಿಸರ ರೂರಲ್ ಡೆವಲೆಪ್‌ ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!