Friday, September 20, 2024

ಪ್ರಾಯೋಗಿಕ ಆವೃತ್ತಿ

ಅಜಿತ್ ಹಿಡಿಯಲಾಗದ ಎಸ್ಐಟಿ ಪ್ರಜ್ವಲ್ ಹಿಡಿಯುವುದೇ ?

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಹೆದರಿಸಿ, ನಮಗೆ ಯಾರೂ ತೊಂದರೆ ಕೊಟ್ಟಿಲ್ಲವೆಂದು ವಿಡಿಯೋ ಮಾಡಿಸಿದ ಪ್ರಕರಣದ ಪ್ರಮುಖ ಆರೋಪಿಗಳು ಭವಾನಿ ರೇವಣ್ಣ ಮತ್ತು ಅವರ ಕಾರಿನ ಡ್ರೈವರ್ ಅಜಿತ್.

ಆದರೆ ಭವಾನಿ ರೇವಣ್ಣ ಅವರಿಗೆ ನೋಟೀಸ್ ಮೇಲೆ ನೋಟೀಸ್ ಕೊಟ್ಟರೂ ಸಹ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ. ಎಸ್ಐಟಿ ಅವರನ್ನು ಮುಟ್ಟಲೂ ಸಹ ಹೆದರಿ‌ ಕೂತಿದೆ. ಸರ್ಕಾರ ಬೇರೆ ಭವಾನಿ ರೇವಣ್ಣ ಅವರ ವಿಚಾರದಲ್ಲಿ ದುಡುಕ ಬೇಡಿ ಅಂತ ಹೇಳಿದೆ. ಹಾಗಾಗಿ ಭವಾನಿ ಅವರ ವಿಚಾರದಲ್ಲಿ ಎಸ್ಐಟಿ ಬಹಳ ತಾಳ್ಮೆಯಿಂದ ಇದೆ.

ಆದರೆ ಯಕಚ್ಚಿತ್ ಕಾರಿನ ಡ್ರೈವರ್ ಅಜಿತ್ ಎಸ್ಐಟಿಯ ದೈತ್ಯ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿರುವುದು ಎಸ್ಐಟಿ ಸಾಮರ್ಥ್ಯವನ್ನೇ ಅನುಮಾನಕ್ಕೀಡು‌ ಮಾಡಿದೆ. ಅಜಿತ್ ಎಂಬ ಡ್ರೈವರ್ ಬಂಧಿಸಲಾಗದವರು ಇನ್ನು ವಿದೇಶದಲ್ಲಿರುವ ಪ್ರಜ್ವಲ್ ಅವರನ್ನು ಬಂಧಿಸುತ್ತಾರಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡುವಂತೆ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!