ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 20 ಅಂಶಗಳ ಕಾರ್ಯಕ್ರಮವು ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಮಂಡ್ಯ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಸೇರಿದಂತೆ ಐವರನ್ನು ಸರ್ಕಾರವು ನಾಮ ನಿರ್ದೇಶನ ಮಾಡಿದೆ.
ಮಂಡ್ಯ ತಾಲೂಕು ಬಸವರಾಳು ಹೋಬಳಿಯ ಚಿಕ್ಕಬಳ್ಳಿ ಗ್ರಾಮದ ಸಿ.ಎಂ ದ್ಯಾವಪ್ಪ ಅವರನ್ನು ಸಾಮಾನ್ಯ ವರ್ಗದಡಿ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಪರಿಶಿಷ್ಟ ವರ್ಗದಿಂದ ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿ ನಟರಾಜ ಬಿನ್ ಮಂಚಯ್ಯ, ಮಹಿಳಾ ವಿಭಾಗದಿಂದ ಶ್ರೀರಂಗಪಟ್ಟಣದ ಆಶಾಲತ ಕೋಂ ಪುಟ್ಟೇಗೌಡ, ಹಿಂದುಳಿದ ವರ್ಗದಿಂದ ಮಳವಳ್ಳಿ ತಾಲ್ಲೂಕಿನ ಸಾಹಳ್ಳಿಯ ಎಸ್.ಸಿ. ಶಶಿರಾಜ್ ಬಿನ್ ಚಿಕ್ಕೇಗೌಡ ಹಾಗೂ ಅಲ್ಪ ಸಂಖ್ಯಾತರ ವಿಭಾಗದಿಂದ ಕೆ.ಆರ್.ಪೇಟೆ ತಾಲ್ಲೂಕಿನ ಚನ್ನನಕೊಪ್ಪಲು ಗ್ರಾಮದ ಮಹಮ್ಮದ್ ಉಜೈಫ್ ಬಿನ್ ಮೊಕತರ್ ಅಹ್ಮದ್ ಅವರನ್ನು ನಾಮಕರಣ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.