Friday, October 18, 2024

ಪ್ರಾಯೋಗಿಕ ಆವೃತ್ತಿ

ಯಾರಾ ಈ ಚೆ ಗುವಾರ?

ಶಿವಸುಂದರ್

(ಇಂದು ಚೆ ಹುಟ್ಟಿದ ದಿನ )

ಮಬ್ಬುಗತ್ತಲನ್ನೇ
ಮುಂಜಾನೆಯೆಂದು
ಭ್ರಮಿಸುವ ಬ್ರಾಂತಿಗಳಿಗೆ

ಬೆಳಕಿನ ಸರ್ಜರಿ ಮಾಡಿದ ವೈದ್ಯ..

ಅಸಮಾನ ಸಮಾಜದಲ್ಲಿ
ಪ್ರಜಾತಂತ್ರವೆಂದರೆ

ಶ್ರಮಿಕರ ಮೇಲೆ
ಬಂಡವಾಳದ
ರಕ್ತರಹಿತ ಯುದ್ಧವೆಂದು
ಅರುಹಿದ ತಿಳಿವು

ಜನರು ಸಂಭ್ರಮಿಸುವ
ಉಳ್ಳವರ ಗೆಲುವುಗಳಲ್ಲಿ

ಚರಿತ್ರೆ ಮುಚ್ಚಿಟ್ಟ
ಸಾಮಾನ್ಯರ ಸೋಲುಗಳನ್ನು
ಬಿಚ್ಚಿಟ್ಟ ಜಾನಪದ…

ಅಂತಿಮ ಜಯದ ತನಕ
ಯುದ್ಧ ಜಾರಿಯಲ್ಲಿರಬೇಕೆಂದೂ..
ಯುದ್ಧದಲ್ಲೇ ಹುತಾತ್ಮನಾದ ಜನತೆಯ ದಂಡನಾಯಕ

ಶತ್ರುವಿನ ಔದಾರ್ಯವನ್ನು
ದಣಿಸುವ ರಣತಂತ್ರವೆಂದೂ

ಯುದ್ಧಮರೆತ
ಕದನವಿರಾಮಗಳು
ಸೋಲಿನ ಮುನ್ನುಡಿಯೆಂದೂ

ಸಾರಿ ಸಾರಿ ಹೇಳಿದ
ಚಾರಿತ್ರಿಕ ಕ್ರಾಂತಿ ಪ್ರಜ್ಞೆ..

ಆದರೆ,

ವರ್ತಮಾನದಲ್ಲಿ..

ಅರುಹನ್ನು ಮರೆತು
ಕುರುಹನ್ನು ಮೆರೆಸುವ
ವಿಬ್ರಾಂತ ಸಂಭ್ರಮ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!