Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜೂ.23ರಿಂದ ಮೈಷುಗರ್ ಕಾರ್ಯಾರಂಭ

ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್, ಮತ್ತೆ ಕಬ್ಬು ಅರೆಯಲು ಸಜ್ಜಾಗಿದೆ. ಜೂನ್ 23ರಿಂದ ಕಾರ್ಖಾನೆ ಪುನಾರಂಭವಾಗಲಿದ್ದು, ಕಬ್ಬು ಅರೆಯುವಿಕೆ ಮತ್ತು ಸಕ್ಕರೆ ಉತ್ಪಾದನೆ ಆರಂಭವಾಗಲಿದೆ.

ಕಾರ್ಖಾನೆ ನಷ್ಟದಲ್ಲಿದೆ ಅದನ್ನು ಖಾಸಗೀಕರಣಗೊಳಿಸಬೇಕೆಂಬ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ಆಗ್ಗಾಗೆ ಮುನ್ನೆಲೆಗೆ ಬರುತ್ತಿದ್ದವು. ಅದಾಗ್ಯೂ, ರೈತರ ಹೋರಾಟದಿಂದಾಗಿ, ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿದಿದೆ. ನಷ್ಟದಲ್ಲಿದ್ದ ಕಾರಣಕ್ಕೆ ಕಾರ್ಖಾನೆಯನ್ನು ಈ ಹಿಂದೆ ಕೆಲ ವರ್ಷಗಳ ಕಾಲ ಮುಚ್ಚಲಾಗಿತ್ತು. ಬಳಿಕ, ರೈತರ ಬೃಹತ್ ಹೋರಾಟದಿಂದಾಗಿ ಪರಿಹಾರ ಒದಗಿಸಿ, ನಷ್ಟವನ್ನು ಸರ್ಕಾರ ತುಂಬಿಕೊಟ್ಟಿತ್ತು.

ಬಳಿಕ, ಕಳೆದ ವರ್ಷ ಕಾರ್ಖಾನೆ ಮತ್ತೆ ಆರಂಭವಾಗಿತ್ತು. ಕಬ್ಬು ಪೂರೈಕೆಯಿಲ್ಲದ ಸಮಯದಲ್ಲಿ ಕಾರ್ಖಾನೆ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಈಗ ಮತ್ತೆ ಕಬ್ಬು ಅರೆಯುವಿಕೆ ಆರಂಭವಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!