Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವಗುರುವಿನ ಬಣ್ಣ ಬಯಲು !

ಕಳೆದ ಲೋಕಸಭಾ ಚುನಾವಣೆಗಳನ್ನು ಗೆಲ್ಲುವ ಅತುರದಲ್ಲಿ ಭಾರತ ವಿಶ್ವಗುರುವಾಗಿದೆ ಎನ್ನುವ ನರೇಟಿವ್ ರೂಪಿಸುವ ಗುರಿಯಿಂದ ಅವಧಿಗೂ ಮುಂಚಿತವಾಗಿ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಾಯಿತು.
ಈಗ ಈ ರೀತಿ ಅತುರದಲ್ಲಿ ಉದ್ಘಾಟನೆಗೊಂಡ ಎಲ್ಲಾ ಯೋಜನೆಗಳು ಕುಸಿದು ಬೀಳುತ್ತಾ,ಬಿರುಕು ಬಿಡುತ್ತಾ ವಿಶ್ವಗುರುವಿನ ಬಣ್ಣವನ್ನು ಬಯಲು ಮಾಡುತ್ತಿವೆ.

ದೇಶದ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ 3 ನ್ನು ಮೋದಿಜೀ ಚುನಾವಣೆಗೂ ಮುಂಚೆ ಉದ್ಘಾಟನೆ ಮಾಡಿದ್ದು ಅದು ಕುಸಿದು ಹಲವು ಜನ ಗಾಯಗೊಂಡು ಒಬ್ಬ ಸಾವನ್ನಪ್ಪಿದ್ದಾನೆ.

“>

 

ಅದೇ ತರಹ ಜಬ್ಬಲ್ ಪುರ ವಿಮಾನ ನಿಲ್ದಾಣದ ಛಾವಣಿ ಸಹ ಕುಸಿದು ಅಪಾರ ಹಾನಿ ಸಂಭವಿಸಿದೆ. ಇದನ್ನು ಮೋದಿಜೀ ಚುನಾವಣೆಗೆ ಮುಂಚೆ ವರ್ಚುವಲ್ ರೀತಿ ಉದ್ಘಾಟನೆ ಮಾಡಿದ್ದರು.ಮುಂಬೈನ ಬಹು‌ಕೋಟಿ ಸಮುದ್ರದ ಬ್ರಿಡ್ಜ್ ಸಹ ಬಿರುಕುಬಿಟ್ಟಿದೆ. ಅಯೋಧ್ಯೆಯ ರಾಮಮಂದಿರದ ಛಾವಣಿ ಕೂಡ ಸೋರುತ್ತಿದ್ದು, ಒಟ್ಟಿನಲ್ಲಿ ವಿಶ್ವಗುರು ಮೋದಿಜೀಯ ಬಣ್ಣ ಬಯಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!