ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕರಿಬ್ಬರು ಹೊಡೆದಾಡಿಕೊಂಡು ಜಗಳ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಇಬ್ಬರು ಉಪನ್ಯಾಸಕರ ನಡುವೆ ಹೊಡೆದಾಟವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಮತ್ತು ಕನ್ನಡ ಉಪನ್ಯಾಸಕ ಜೆ.ಜಿ ನಾಗರಾಜ್ ನಡುವೆ ಜಗಳ ನಡೆದಿದೆ. ಗಲಾಟೆಯಲ್ಲಿ ನಾಗರಾಜ್ ಅವರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ನೇಹಿತರಾಗಿದ್ದ ನಾಗನಂದ ಕೆಂಪರಾಜು ಹಾಗೂ ಜೆ.ಜಿ.ನಾಗರಾಜ ಮಧ್ಯೆ ಕಳೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವಿಷಯವಾಗಿ ಮನಸ್ಥಾಪಗಳು ಆರಂಭವಾಗಿತ್ತು. ಈ ಕುರಿತು ಮಂಗಳವಾರ ದಿಢೀರ್ ಜಗಳ ಶುರುವಾಗಿ, ಪ್ರಾಂಶುಪಾಲರು, ಶಿಕ್ಷಕಕರ ಎದುರೇ ಇಬ್ಬರ ಮಧ್ಯೆ ಗಲಾಟೆ, ಹೊಡೆದಾಟ ನಡೆದಿದೆ.
ಜಗಳದ ವೇಳೆ ನಾಗನಂದ ಕೆಂಪರಾಜು ಅವರು ನನ್ನ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ ಎಂದು ಜೆ.ಜಿ.ನಾಗರಾಜ ಆರೋಪ ಮಾಡಿದ್ದು, ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರ ಬೀಳಲಿದೆ.