ಕಳೆದ ಜು.16ರಂದು ರಾತ್ರಿ ಮಂಡ್ಯದಿಂದ ಬೂದನೂರಿಗೆ ತೆರಳುವಾಗ ಮಂಡ್ಯ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಬೈಕ್ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಳೇ ಬೂದನೂರು ಗ್ರಾಮದ ಪಿಎಲ್’ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಸ್.ವಿಜಯ್’ಕುಮಾರ್ (48) ಮಂಗಳವಾರ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ವಿಜಯಕುಮಾರ್ ಅವರ ಬೆನ್ನು ಹಾಗೂ ಕಾಲಿಗೆ ತೀವ್ರ ಗಾಯಗಳಾಗಿ ಮೈಸೂರು, ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ(ಆ.21) ಬೆಳಿಗ್ಗೆ 11 ಗಂಟೆಗೆ ಗ್ರಾಮದಲ್ಲಿ ಜರುಗಲಿದೆ.
ಮೃತರು ಪತ್ನಿ, ಬೂದನೂರು ಗ್ರಾಪಂ ಮಾಜಿ ಅಧ್ಯಕ್ಷೆ ಬಿ.ಟಿ.ಆಶಾ, ಇಬ್ಬರು ಮಕ್ಕಳು ಹಾಗೂ ಸೋದರ ಸಂಬಂಧಿಗಳಾದ ಶಾರದ ಸೋಮಶೇಖರ್, ಶಿವರಾಮ್, ಚಂದ್ರಹಾಸ, ಸ್ವರೂಪ್ ಮತ್ತು ಬಾಮೈಕ್ಕಳಾದ ಎನ್’ಎಸ್’ಎಲ್ ಷುಗರ್ ಸೂಪರ್ ವೈಸರ್ ಬಿ.ಟಿ.ರಾಜೇಂದ್ರ, ವಕೀಲ ಬಿ.ಟಿ.ಮಹೇಶ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.