Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಚ್ಐವಿ ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ನೋಡಬೇಕು: ಡಾ.ರವೀಂದ್ರ

ಸಮಾಜದಲ್ಲಿ ಎಚ್ಐವಿ ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ನೋಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮದ್ದೂರು ತಾಲೂಕಿನ ತಾಲೂಕು ಆರೋಗ್ಯ ಅಧಿಕಾರಿ ಡಾ. ರವೀಂದ್ರ ತಿಳಿಸಿದರು.

ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಮಂಡ್ಯ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಸೆನ್ಸ್ ಸೊಸೈಟಿ ಬೆಂಗಳೂರು ,ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ ಮಂಡ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡರಸಿನಕೆರೆ ಹಾಗೂ ಸೌಹಾರ್ದ ಸಾಂಸ್ಕೃತಿಕ ಕಲಾ ಸಂಘ ಹನಿಯಂಬಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯರನ್ನು ಮನುಷ್ಯರಂತೆ ಕಾಣಬೇಕಾಗಿದೆ, ಎಚ್ಐವಿ ಬಂದಿರುವ ವ್ಯಕ್ತಿಯನ್ನು ಮುಟ್ಟುವುದರಿಂದ ಜೊತೆಯಲ್ಲಿ ಊಟ ಮಾಡುವುದರಿಂದ, ಅವರು ಬಳಸಿದ ಶೌಚಾಲಯವನ್ನು ನಾವು ಬಳಸುವುದರಿಂದ ಜೊತೆಯಲ್ಲಿ ಮಾತಾಡುವುದರಿಂದ ಈ ಎಚ್ಐವಿ ಸೋಂಕು ಬರುವುದಿಲ್ಲ, ಅವರನ್ನು ಎಚ್ಐವಿ ಇಂದ ಏಡ್ಸ್ ಹಂತಕ್ಕೆ ಹೋಗಲು ಬಿಡುವುದಿಲ್ಲ. ಅದಕ್ಕಾಗಿ ಔಷಧಿಯನ್ನು ಕೊಡಲಾಗುತ್ತದೆ ಅವರನ್ನು ನಮ್ಮ ಸಮಾಜ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಷ್ಣು ಪ್ರಸಾದ್ ಮಾತನಾಡಿ, ಇಂದಿನ ಯುವಕರೇ ಮತ್ತು ಯುವತಿಯರು ಅಲ್ಪ ತೃಪ್ತಿಗಾಗಿ ಎಚ್ಐವಿಗೆ ಬಲಿಯಾಗುತ್ತಿದ್ದಾರೆ. ಇಂತಹ ಬೀದಿ ನಾಟಕದ ಮೂಲಕ ಯುವ ಜನರಿಗೆ ಜಾಗೃತಿ ಕಾರ್ಯಕ್ರಮ ಬೇಕಾಗಿದೆ ಎಂದರು.

ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘ ರವರಿಂದ ಹಾಡು ನೃತ್ಯ ಮತ್ತು ಬೀದಿ ನಾಟಕದ ಮೂಲಕ ಹೆಚ್ಐವಿ ಏಡ್ಸ್ ಬಗ್ಗೆ ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪಿ.ಹೆಚ್.ಸಿ.ಓ ಶೇತಾ ಸಿ. ಸಿಎಚ್ಓ ಕಾವ್ಯ ಆರ್, ಆಶಾ ಕಾರ್ಯಕರ್ತರಾದ ತಾಯಮ್ಮ, ಭಾನುಮತಿ, ಸಂಪರ್ಕ ಕಾರ್ಯಕರ್ತರಾದ ಮಾನಸ ಹಾಗೂ ತಾಲೂಕು ಮೇಲ್ವಿಚಾರಕರಾದ ಗಿರೀಶ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನಿಯಂಬಾಡಿ ಎನ್,ಶೇಖರ, ಯರಹಳ್ಳಿ ಹೋನೇಶ್, ಹೆಚ್.ಬಿ.ರಾಮಕೃಷ್ಣ, ವೈ.ಸಿ. ಕುಮಾರ್, ದೇವೇಗೌಡ, ಬನ್ನೂರು ಅನುಸೂಯ ಇದ್ದರು. ದೊಡ್ಡರಸಿನಕೆರೆ ಗ್ರಾಮದ ನೂರಾರು ಜನ ಕಾರ್ಯಕ್ರಮ ವೀಕ್ಷಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!