ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬೆಳಗೊಳ ಕ್ಷೇತ್ರದ ವಿಶ್ವಮಂಗಳ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕ ನೆರವೇರಿತು.
ದೇವಸ್ಥಾನದ ರಾಜಗೋಪುರ, ಪ್ರಾಕಾರಗಳ ಉದ್ಘಾಟನೆಯೂ ಜರುಗಿತು, 200ಕ್ಕೂ ಹೆಚ್ಚು ವೈದಿಕರಿಂದ ಪೂಜಾ ವಿಧಿವಿಧಾನವು ಬೆಳಿಗ್ಗೆ 6 ಗಂಟೆಯಿಂದಲೇ ನಡೆಯಿತು.
ಸುಪ್ರಭಾತ, ನಿತ್ಯ ಹೋಮ, ದೇವತಾ ಹೋಮಾ, ಮಹಾ ಪೂರ್ಣಾವತಿ, ಕುಂಭ ಪ್ರದಕ್ಷಣ ಪೂರ್ವಕ ಬಳಿಕ ಕುಂಭಾಭೀಷೇಕ, ಮಹಾ ನೈವೇದ್ಯ, ಮಂಗಳಾರತಿ ಸಮರ್ಪಣೆ ಜರುಗಿತು.
ದೇವಸ್ಥಾನದ ಅಂಗಳದಲ್ಲಿ ಶೃದ್ಧಾ ಭಕ್ತಿಯಿಂದ ಜರುಗಿದ ಧಾರ್ಮಿಕ ಕಾರ್ಯ ಜರುಗಿತು, ಮಂಗಳ ದ್ರವ್ಯಗಳ ಪ್ರೋಕ್ಷಣೆ ಮೂಲಕ ಪೂಜಾ ಕೈಂಕರ್ಯ ನಡೆಯಿತು. ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಜರುಗಿತು. ಶ್ರೀ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುತ್ತಿಧ 12 ವರ್ಷಗಳ ಕಾಲ ದೀರ್ಘ ಸತ್ರ ಮಹಾಯಾಗ ನಡೆಯುತ್ತಿದ್ದು, ಭಕ್ತರು ಲಕ್ಷ್ಮಿ ನರಸಿಂಹನ ದರ್ಶನ ಪಡೆದರು.