ಬಿಜೆಪಿ ಶಾಸಕ ಮುನಿರತ್ನ ಒಬ್ಬ ಜನಪ್ರತಿನಿಧಿಯಾಗಿ ಗುತ್ತಿಗೆದಾರ ಚಲುವರಾಜು ಜೊತೆಯಲ್ಲಿ ಮಾತನಾಡುವಾಗ ಅವಹೇಳನಕಾರಿಯಾಗಿ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಹಾಗೂ ಆತನನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಕಾರ್ಯಕರ್ತರು ಮಂಡ್ಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಮುನಿರತ್ನ ಫೋನ್ ಸಂಭಾಷಣೆಯಲ್ಲಿ ಜಾತಿಯನ್ನ ಹಿಡಿದು ನಿಂದಿಸಿ, ಕೊಲೆಬೆದರಿಕೆ ಹಾಕಿ, ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಪದಬಳಿಸಿ ನಿಂದಿಸಿರುವುದು ಹೊರಗೆ ಬಂದಿದೆ, ಆತನನ್ನು ವಿಧಾನಸಭಾಧ್ಯಕ್ಷ ಕೂಡಲೇ ವಜಾಗೊಳಿಬೇಕೆಂದು ಆಗ್ರಹಿಸಿದರು.
ಮುನಿರತ್ನ ಸಂವಿಧಾನದ ಅನುಚ್ಛೇದ 14.15.16.17ನ್ನ ಗೌರವಿಸದೆ ಜಾತಿ ನಿಂದಿಸಿ, ಅಸ್ಪೃಶ್ಯತೆ ಆಚರಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಅನಾಗರಿಕವಾಗಿ ವರ್ತಿಸಿರುವ ಮುನಿರತ್ನನನ್ನ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ರೀನಿವಾಸ್ ಕೆ.ಎಂ, ಚನ್ನಕೇಶವ, ಕುಮಾರ್ ಹಾಗೂ ಬಲರಾಮ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.