ಮುಂಬರುವ ಡಿಸೆಂಬರ್ನಲ್ಲಿ ಮಂಡ್ಯದ ನೆಲದಲ್ಲಿ ನಡೆಸಲು ಉದ್ಧೇಶಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ “ಸನ್ಮಾರ್ಗದಲ್ಲಿ ಚಲಿಸದೆ ಅಡ್ಡದಾರಿಯಲ್ಲಿ ಸಾಗುತ್ತಿದೆ” ಎಂದು ಹಿರಿಯರಾದ ಜಿ.ಟಿ. ವೀರಪ್ಪ, ಅಂಕಣಕಾರ ಬಿ.ಚಂದ್ರೇಗೌಡ ಮತ್ತು ಸಿಪಿಕೆ ಅವರು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಚಿತ್ರಕೂಟದ ಗೆಳೆಯರ ಸಭೆಯು ಮಂಡ್ಯದ ವಿ.ವಿ ರಸ್ತೆಯ ಎಂವಿಜಿ ಬೇಕರಿ ಪಕ್ಕದಲ್ಲಿರುವ ರೈತಬಂಧು ಫೌಂಡೇಶನ್ ಸಭಾಂಗಣ ಸೆ.20ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಈ ಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ಮಾತನಾಡಲು 5 ನಿಮಿಷ ಕಾಲಾವಧಿಯನ್ನು ನೀಡಲಾಗಿದೆ. ಬೇರೆಯವರು ಮಾತನಾಡುವಾಗ ಯಾರೂ ಕೂಡ ಮಧ್ಯ ಪ್ರವೇಶ ಮಾಡುವುದು ಬೇಡ ಎಂಬ ನಿಯಮವನ್ನು ಎಲ್ಲರೂ ಪಾಲಿಸುವಂತೆ ಮನವಿ ಮಾಡಲಾಗಿದೆ. ಎಲ್ಲ ಕನ್ನಡ ಮನಸ್ಸುಗಳು, ಸಾಹಿತ್ಯಾಸಕ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.