Sunday, October 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| “ಬಾ ಗುರು ಕಬ್ಬು ಕಡಿ – ಕೃಷಿ ಕ್ರೀಡಾಕೂಟ”

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸಿ.ಎ.ಕೆರೆ ಹೋಬಳಿಯ ಕಾರಕಹಳ್ಳಿ ಗ್ರಾಮದಲ್ಲಿ ಅ.4ರಂದು ”ಬಾ ಗುರು ಕಬ್ಬು ಕಡಿ- ಕೃಷಿ ಕ್ರೀಡಾಕೂಟ” ನಡೆಯಲಿದೆ.

ಸದಾಶಯ ಚಾರಿಟಬಲ್ ಟ್ರಸ್ಟ್, ಸರ್.ಎಂ.ವಿಶ್ವೇಶ್ವರಯ್ಯ ಯುವಕರ ಬಳಗ, ಎನ್.ಕೆ.ಯುವ ಬ್ರಿಗೇಡ್, ಹಾಗೂ ಪ್ರಜಾಪ್ರಿಯ ಸೇವಾ ಟ್ರಸ್ಟ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ಪರ್ಧೆ ನಡೆಯಲಿದೆ.

ಒಂದು ತಂಡದಲ್ಲಿ ಕಡ್ಡಾಯವಾಗಿ 6 ಮಂದಿ ಮಾತ್ರ ಇರತಕ್ಕದ್ದು. ಮದ್ದೂರು ತಾಲ್ಲೂಕಿನ ನಿವಾಸಿಗಳಿಗೆ ಮಾತ್ರ ಅವಕಾಶ, (ಗುರುತಿನ ಚೀಟಿ ಕಡ್ಡಾಯ).  ಸ್ಪರ್ಧೆಯು ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ. ಕಟಾವು ಮಾಡಿದ ಕಬ್ಬನ್ನು ಕಂತೆ ಕಟ್ಟುವುದು ಕಡ್ಡಾಯ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿದೆ, ಪ್ರವೇಶ ಶುಲ್ಕ ರೂ. 1000 (ಸ್ಪರ್ಧೆ ಮುಗಿದ ನಂತರ ಪ್ರವೇಶ ಶುಲ್ಕವನ್ನು ಹಿಂದಿರುಗಿಸಲಾಗುವುದು). ಜಮೀನಿನ ರೈತರಿಗೆ ನಷ್ಟವಾಗದಂತೆ, ಶಿಸ್ತು ಬದ್ಧವಾಗಿ ಕಟಾವು ಮಾಡಿ ಸಂಪೂರ್ಣವಾಗಿ ಕಬ್ಬಿನಿಂದ ತರಗನ್ನು ಬೇರ್ಪಡಿಸಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!