ಮಳವಳ್ಳಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಬಳಿಕ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಬುಧವಾರ ಮೊದಲ ಬಾರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬ್ಯಾಂಕಿಗೆ ಆಗಮಿಸಿದ ಶಾಸಕ ನರೇಂದ್ರಸ್ವಾಮಿ ಅವರನ್ನು ಪ್ರಭಾರ ಅಧ್ಯಕ್ಷ ಎಚ್.ಕೆ. ಅಶೋಕ್ ಹಾಗೂ ನಿರ್ದೇಶಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ನರೇಂದ್ರಸ್ವಾಮಿ ಅವರು ಬ್ಯಾಂಕಿನ ಆವರಣದಲ್ಲಿರುವ ನಿತ್ಯ ಸಚಿವ ಮತ್ತು ಬ್ಯಾಂಕ್ನ ಸಂಸ್ಥಾಪಕ ಕೆ.ವಿ. ಶಂಕರಗೌಡರ ಪುತ್ತಳಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದರು.
ಬಳಿಕ ಬ್ಯಾಂಕಿನ ಸಭಾಂಗಣಕ್ಕೆ ತೆರಳಿದ ಶಾಸಕ ಪಿ.ಎಂ.ನರೇAದ್ರಸ್ವಾಮಿ ಅವರನ್ನು ನಿರ್ದೇಶಕರು ಸನ್ಮಾನಿಸಿದರು. ನಂತರ ಶಾಸಕರು ನಿರ್ದೇಶಕರೊಂದಿಗೆ ಮುಂದಿನ ಅಧ್ಯಕ್ಷರ ಆಯ್ಕೆ ಸಂಬAಧ ಸಮಾಲೋಚನೆ ನಡೆಸಿದರು.
ಈ ಸಂದರ್ಭ ನಿರ್ದೇಶಕರಾದ ಜೋಗಿಗೌಡ, ಸಂದರ್ಶ, ಗುರುಸ್ವಾಮಿ, ಚಲುವರಾಜು, ಕಾಳೇಗೌಡ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಅಶ್ವತ್ಥ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಡಾ. ಎಚ್.ಕೃಷ್ಣ ಇತರರಿದ್ದರು.