Friday, October 18, 2024

ಪ್ರಾಯೋಗಿಕ ಆವೃತ್ತಿ

ದುಬೈ| ಕೆಂಪೇಗೌಡ ಉತ್ಸವಕ್ಕೆ ಶಾಸಕ ರವಿಕುಮಾರ್ ಗೆ ವಿಶೇಷ ಆಹ್ವಾನ

ಅರಬ್ ರಾಷ್ಟ್ರ ಯುಎಇ ನ ದುಬೈನಲ್ಲಿ ಬರುವ ಅ.27ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡ ಉತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಮಂಡ್ಯ ಶಾಸಕ ರವಿಕುಮಾರ್ ಗೌಡ ಗಣಿಗ ಅವರನ್ನು ದುಬೈ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಆಹ್ವಾನಿಸಿದರು.

ದುಬೈ ಒಕ್ಕಲಿಗರ ಸಂಘದ ಕೋರ್ ಕಮಿತಿ ಸದಸ್ಯ ವಿಶಾಲ್ ರಾಮಕೃ‍ಷ್ಣೇಗೌಡ ನೇತೃತ್ವದಲ್ಲಿ ತಂಡ ಮಂಡ್ಯ ಶಾಸಕ ರವಿಕುಮಾರ್ ಅವರ ಕಚೇರಿಗೆ ತೆರಳಿ ಆಹ್ವಾನ ನೀಡಿದರು. ಇದೇ ಸಮಾರಂಭದಲ್ಲಿ ದುಬೈನಲ್ಲಿ ನೆಲೆಸಿ ಉದ್ಯಮದಲ್ಲಿ ಯಶಸ್ವಿಯಾಗಿರುವ ಹಲವರಿಗೆ ‘ದುಬೈ ಕೆಂಪೇಗೌಡ ಬಿಸಿನೆಸ್ ಅವಾರ್ಡ್’ ಪ್ರದಾನ ಮಾಡಲಾಗುವುದು.

ಈ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃ‍ಷ್ಣ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ನುಡಿಕರ್ನಾಟಕ.ಕಾಂ ಗೆ ವಿಶಾಲ್ ರಾಮಕೃ‍ಷ್ಣೇಗೌಡ ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!