Wednesday, October 23, 2024

ಪ್ರಾಯೋಗಿಕ ಆವೃತ್ತಿ

ಪೇಜಾವರ ಶ್ರೀಗಳ ಜಾತ್ಯಾತೀತತೆಯ ಮಾತು “ಭೂತದ ಬಾಯಲ್ಲಿ ಭಗವದ್ಗೀತೆ” ಕೇಳಿದಂತಿದೆ ; ಬಿ.ಕೆ.ಹರಿಪ್ರಸಾದ್

ಪೇಜಾವರ ಶ್ರೀಗಳು ಜಾತ್ಯಾತೀತತೆ ಬಗ್ಗೆ ಮಾತಾಡುವುದು “ಭೂತದ ಬಾಯಲ್ಲಿ ಭಗವದ್ಗೀತೆ” ಕೇಳಿದಂತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯನ್ನು ವಿರೋಧಿಸುವ ಪೇಜಾವರ ಶ್ರಿಗಳು, ತಮ್ಮ ಮಠದಲ್ಲಿನ ಶ್ರೇಣೀಕೃತ ಜಾತಿ ಆಚರಣೆಯ ಬಗ್ಗೆ ಮೊದಲು ಮಾತಾಡಲಿ ಎಂದು ಸವಾಲು ಹಾಕಿದರು.

ಅನಿಷ್ಠ ಪಂಕ್ತಿ ಭೇದ, ಮಡೆಸ್ನಾನವನ್ನು ಪೋಷಿಸಿ,ಕಾವಿ ಬಟ್ಟೆ ಹಾಕಿಕೊಂಡು ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಸ್ವಾಮೀಜಿಗಳು ಬಿಡಲಿ, ಹಿಂದೆ ಸ್ವಾಮೀಜಿಗಳಾದವರು ಸರ್ವಸಂಗ ಪರಿತ್ಯಾಗಿಗಳಾಗಿದ್ದರು. ಈಗಿನ ಸ್ವಾಮಿಜೀಗಳು ಪುಡಿ ರಾಜಕಾರಣಿಗಳಂತೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!