Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶೂ ಧರಿಸದ ಕಾರಣಕ್ಕೆ ವಿದ್ಯಾರ್ಥಿಗಳನ್ನ ಗಂಟೆಗಟ್ಟಲೆ ಆಚೆ ನಿಲ್ಲಿಸಿದ ಶಿಕ್ಷಕರು !

ಶೂ ಧರಿಸಿ ಬರಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನ ಗಂಟೆಗಟ್ಟಲೆ ಆಚೆ ನಿಲ್ಲಿಸಿದ ಘಟನೆ
ಮಂಡ್ಯನಗರದ ಅಭಿನವ ಭಾರತಿ ವಿದ್ಯಾಕೇಂದ್ರದಲ್ಲಿ ಸೋಮವಾರ ನಡೆದಿದೆ.

ಶಾಲಾ ಆವರಣದಲ್ಲಿ ಕೈ ಕಟ್ಟಿ ನಿಂತಿದ್ದ 7ನೇ ತರಗತಿಯ ಮೂವರು ವಿದ್ಯಾರ್ಥಿಗಳು. ಹಾಸ್ಟೆಲ್ ನಲ್ಲಿ ಇರುವ ಮೂವರು ವಿದ್ಯಾರ್ಥಿಗಳು. ರಾತ್ರಿ ಮಳೆ ಬಂದು ಮಳೆಗೆ ಶೂ ಒದ್ದೆ ಆಗಿದ್ದ ಹಿನ್ನೆಲೆ ಶೂ ಧರಿಸದೆ ಶಾಲೆಗೆ ಬಂದಿದ್ದರು ಎನ್ನಲಾಗಿದೆ. ಆದರೆ ಇದನ್ನೇ ದೊಡ್ಡ ಅಪರಾಧವೆಂಬಂತೆ ಪರಿಗಣಿಸಿ ಶಿಕ್ಷಕರು ಕೊಠಡಿಯಿಂದ ಹೊರಗಡೆ ಗಂಟೆಗಟ್ಟಲೇ ನಿಲ್ಲಿಸಿದ್ದರು.

ಮಾಧ್ಯಮದವರು ಈ ಕುರಿತಂತೆ ವರದಿ ಮಾಡಲು ತೆರಳಿದಾ ಕ್ಯಾಮೆರಾ ಕಂಡು ಎಚ್ಚೆತ್ತ ಶಿಕ್ಷಕಿಯೊಬ್ಬರು,
ಕೊಠಡಿಯೊಳಗೆ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋದರು. ತಡವಾಗಿ ಶಾಲೆಗೆ ಬಂದಿದ್ದಕ್ಕೆ ಕೊಠಡಿಯಿಂದ ಹೊರ ನಿಲ್ಲಿಸಿರುವುದಾಗಿ ಶಿಕ್ಷಕಿ ಸಮಜಾಯಿಸಿ ನೀಡಿದರು. ಯಾಕೆ ತಡವಾಗಿ ಬಂದ್ರಿ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿ ಒಳಗಡೆ ನಡಿರಿ ತರಗತಿಯೊಳಕ್ಕೆ ಕರೆದೊಕೊಂಡರು.

ಮಾಧ್ಯಮದವರ ಪ್ರಶ್ನೆಗೆ ತಬ್ಬಿಬ್ಬಾದ ಶಿಕ್ಷಕಿ, ನಮಗೆ ಗೊತ್ತಿಲ್ಲ, ನಮ್ಮ ಪ್ರಿನ್ಸಿಪಲ್ ಅವರನ್ನ ಕೇಳುವಂತೆ ಆರಿಕೆ ಉತ್ತರ ನೀಡಿದರು. ಖಾಸಗಿ ಶಾಲಾ ಆಡಳಿತ ಮಂಡಳಿಯ ದರ್ಪಕ್ಕೆ ಗಂಟೆಗಟ್ಟಲೆ ಕೈ ಕಟ್ಟಿ ನಿಂತ ಮಕ್ಕಳು, ಶಿಕ್ಷೆ ಅನುಭವಿಸುವಂತಾಯಿತು.

Related Articles

1 COMMENT

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!