ಮಳವಳ್ಳಿ ತಾಲ್ಲೂಕಿ ಕಿರುಗಾವಲು ಚೆಸ್ಕಾಂ ಕಚೇರಿಗೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಸಮರ್ಪಕ ವಿದ್ಯುತ್ ನೀಡುವಂತೆ ಅಧಿಕಾರಿಗಣನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಮಳವಳ್ಳಿ ತಾಲ್ಲೂಕು ಮಹಾದೇವಸ್ವಾಮಿ ಮಾತನಾಡಿ, ರೈತರ ಪಂಪ್ ಸೆಟ್ ಗಳಿಗೆ ಸರ್ಕಾರದ ಆದೇಶದಂತೆ ದಿನಕ್ಕೆ 7 ತಾಸು ವಿದ್ಯುತ್ ನೀಡಬೇಕಾಗಿದೆ, ಅದರಂತೆ ಬೆಳಿಗ್ಗೆ ಸಮಯ 4 ತಾಸು ಮತ್ತು ರಾತ್ರಿ ಸಮಯ 3 ತಾಸು ವಿದ್ಯುತ್ ನೀಡಲಾಗುತ್ತಿದೆ, ಆದರೆ ಬೆಳಿಗ್ಗೆ ಸಮಯವಾಗಲಿ ಅಥವಾ ರಾತ್ರಿ ಸಮಯದಲ್ಲಿ ಆಗಲಿ ವಿದ್ಯುತ್ ಟ್ರೀಪ್ ಆದರೆ ಮತ್ತೆ ವಿದ್ಯುತ್ ನೀಡುತ್ತಿಲ್ಲ, ವಾರದಲ್ಲಿ 3-4 ದಿನ ಇಂತಹ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಈ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು.
ಮಳವಳ್ಳಿ ತಾಲ್ಲೂಕು ಕಚೇರಿಯಲ್ಲಿಯಲ್ಲಿಯೂ ಸಾರ್ವಜನಿಕರ ಕೆಲವವನ್ನು ಸಮರ್ಪಕವಾಗಿ ಮಾಡಿಕೊಡುವಂತೆ ಒತ್ತಾಯಿಸಿ ಅಭಿಯಾನ ನಡೆಸಿದ ಕಾರ್ಯಕರ್ತರು, ಸತತ ಮೂರು ವರ್ಷಗಳಿಂದಲೂ ಕೆಲವು ಜನಸಾಮಾನ್ಯರನ್ನು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.