ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳದವರು ಯಾರು ಇಲ್ಲ. ಅಜಾತಶತ್ರು ಎನ್ನುವ ಪದಕ್ಕೆ ಸರಿಯಾದ ಅರ್ಥ ಅಂಬರೀಶ್ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬರೀಶ್ ಅವರ ನಾಲ್ಕನೇ ಪುಣ್ಯ ಸ್ಮರಣೆ ಅಂಗವಾಗಿ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಂಬರೀಶ್ ಅವರು ನಮ್ಮನ್ನಗಲಿ 4 ವರ್ಷ ಕಳೆದರೂ, ಅಭಿಮಾನಿಗಳಿಗೆ ಅಂಬಿ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಂಬಿ ನೆನಪಲ್ಲಿ ಅಭಿಮಾನಿಗಳು ಹಲವಾರು ಜನಪರ ಕೆಲಸ ಮಾಡುತ್ತಿದ್ದಾರೆ. ಅಂಬರೀಶ್ ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು.ಹಾಗಾಗಿ ಅವರನ್ನು ಮಿಸ್ ಮಾಡಿಕೊಳ್ಳದವರೇ ಇಲ್ಲ. ಅಂಬರೀಶ್ ಅವರ ಜೊತೆ ಅಪ್ಪು ಪುನೀತ್ ಪ್ರತಿಮೆ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಬಹಳ ಚಿಕ್ಕ ವಯಸ್ಸಿನಲ್ಲೇ ಅಪ್ಪು ನಮ್ಮಿಂದ ದೂರವಾದ. ಅಂಬರೀಶ್ ಅವರಂತೆ ಅಭಿಮಾನಿಗಳು ಪುನೀತ್ ಸ್ಮರಣೆ ಮಾಡಿದ್ದಾರೆ ಎಂದರು.
ಹುಡುಗಿ ಸಿಕ್ಕರೆ ತಿಳಿಸಿ
ನಟ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಷಯದ ಬಗ್ಗೆ ಕಳೆದ 3 ವರ್ಷಗಳಿಂದ ವಿಷಯ ಕೇಳಿ ಬರ್ತಿದೆ.
ಹುಡುಗಿ ಸಿಕ್ಕಿದರೆ ನನಗೂ ತಿಳಿಸಿ, ನಾನು ನೋಡ್ತೀನಿ ಎಂದು ಮಗನ ಮದುವೆ ವಿಚಾರದ ಬಗ್ಗೆ ನಗುತ್ತಲೇ ಸುಮಲತಾ ಅಂಬರೀಶ್ ಹೇಳಿದರು.