ಮಂಡ್ಯ ತಾಲ್ಲೂಕು ಭೂ ನ್ಯಾಯಮಂಡಳಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಗ್ರಾಮದ ಅರುಣ್ ಕುಮಾರ್ ಅವರನ್ನು ನೇಮಕ ಮಾಡಿ ಕಂದಾಯ ಇಲಾಖೆ (ಭೂ ಸುಧಾರಣೆ)ಯ ಅಧೀನ ಕಾರ್ಯದರ್ಶಿ ಗೌರಮ್ಮ ಆದೇಶ ಹೊರಡಿಸಿದ್ದಾರೆ.
ಭೂ ನ್ಯಾಯ ಮಂಡಳಿಯ ಸರ್ಕಾರದ ನೂತನ ನಾಮ ನಿರ್ದೇಶಿತ ಸದಸ್ಯರಾದ ಅರುಣ್ ಪಣಕನಹಳ್ಳಿ ಅವರನ್ನು ಶಾಸಕ ಪಿ.ರವಿಕುಮಾರ್ ನೇಮಕ ಪತ್ರ ಹಸ್ತಾಂತರಿಸುವ ಮೂಲಕ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಅರುಣ್ ಕುಮಾರ್ ಮತ್ತು ಸ್ನೇಹಿತರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.