Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಅಕ್ರಮ ಗಣಿಗಾರಿಕೆ; ವ್ಯಕ್ತಿ ಮೇಲೆ ಹಲ್ಲೆ

ನಾಗಮಂಗಲ ಪಟ್ಟಣದ ಬಸವೇಶ್ವರ ನಗರದ ಮಾದೇವಮ್ಮ ಹಾಗೂ ರುದ್ರೇಶ್ ಎಂಬುವವರು ಮೇಲೆ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ. ಕೃಷಿ ಜಮೀನು ಕಬಳಿಕೆ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡುವ ದುರುದ್ದೇಶ ಹೊಂದಿರುವ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ರುದ್ದೇಶ್ ಆರೋಪಿಸಿದ್ದಾರೆ.

ನಾಗಮಂಗಲ ಬಸವೇಶ್ವರನಗರದ ಮುಖ್ಯ ರಸ್ತೆಯಲ್ಲಿ ಸೋಮವಾರ ತಡರಾತ್ರಿ ದುಷ್ಕೃತ್ಯ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ರುದ್ರೇಶ್ ಅವರನ್ನು ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಂಕನಹಳ್ಳಿ ಸರ್ವೆ ನಂ. 54 ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವ ಉದ್ದೇಶದಿಂದ ಹಲವರು ತಮಗೆ  ಒಂದು ತಿಂಗಳಿಂದ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆವ , ಇದರಿಂದ ಕುಪಿತಕೊಂಡ ಅಕ್ರಮ ಗಣಿಗಾರಿಕೆ ದಂಧೆಕೋರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ಪ್ರಾಣ ಭಯವಿದೆ ಪೊಲೀಸರು ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!