Tuesday, October 22, 2024

ಪ್ರಾಯೋಗಿಕ ಆವೃತ್ತಿ

ಅಟಲ್ ಸೇತುವೆ ಬಿರುಕು| ಕಳಪೆ ಕಾಮಗಾರಿಯೇ ಮೋದಿ ಸರ್ಕಾರದ ಸಾಧನೆ ಎಂದ ಕಾಂಗ್ರೆಸ್

ಮುಂಬೈನಲ್ಲಿ ಉದ್ಘಾಟನೆಯಾದ ಕೇವಲ 5 ತಿಂಗಳಲ್ಲಿ ಅಟಲ್ ಸೇತುವೆಯ ರಸ್ತೆ ಬಿರುಕು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಕಳಪೆ ಕಾಮಗಾರಿಯೇ ಮೋದಿ ಸರ್ಕಾರದ 10 ವರ್ಷದ ಸಾಧನೆ ಎಂದು ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಆಡಳಿತವನ್ನು ಲೇವಡಿ ಮಾಡಿದೆ.

ಕೇಂದ್ರ ಬಿಜೆಪಿ ಸರ್ಕಾರ ಈ ಸೇತುವೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತ್ತು, ಇದರ ಕಳಪೆ ಕಾಮಗಾರಿಯ ಅಸಲಿ ಬಂಡವಾಳ ಈಗ ಬೆಳಕಿಗೆ ಬಂದಿದೆ, “ಮೇಲೆ ತಳುಕು, ಒಳಗೆ ಹುಳುಕು“ ಎನ್ನುವಂತೆ ಕೇಂದ್ರ ಸರ್ಕಾರ ನಿರ್ಮಿಸಿದ ಕಾಮಗಾರಿಗಳೆಲ್ಲವೂ ಕಳಪೆಯಾಗಿವೆ ಎಂದು ಕಾಂಗ್ರೆಸ್ ಬೊಟ್ಟು ಮಾಡಿದೆ.

ಈ ಹಿಂದೆ ಪ್ರಗತಿ ಮೈದಾನ ಟನಲ್ ನಲ್ಲಿ ನೀರು ತುಂಬಿತ್ತು ಬಳಕೆಗೆ ಸಾಧ್ಯವೇ ಇಲ್ಲ ಎನ್ನುವ ವರದಿ ಬಂದಿತ್ತು, ಈಗ ಅಟಲ್ ಸೇತುವೆಯ ಸರದಿ. ಕಳಪೆ ಕಾಮಗಾರಿಯೇ ಮೋದಿ ಸರ್ಕಾರದ 10 ವರ್ಷದ ಸಾಧನೆ ಎಂದು ಟೀಕಿಸಿದೆ.

“>

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!