Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೇಖಕಿ ಡಾ.ಸುಮಾರಾಣಿ ಅವರ ಕೃತಿಗಳ ಲೋಕಾರ್ಪಣೆ

ಮಂಡ್ಯ ಚಿರಂತ ಪ್ರಕಾಶನ ಇವರ ಆಶ್ರಯದಲ್ಲಿ ಲೇಖಕಿ ಡಾ.ಸುಮಾರಾಣಿ ಶಂಭು ಅವರ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಅ.23ರಂದು ಬೆಳಗ್ಗೆ 10.30ಕ್ಕೆ ಮಂಡ್ಯ ನಗರದ ಹಿಂದಿ ಭವನದ ಪ್ರೇಮ್ ಚಂದ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಸ್ವರ್ಣ ಟಿವಿ ಪ್ರಧಾನ ಸಂಪಾದಕ ಕಬ್ಬನಹಳ್ಳಿ ಶಂಭು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಖ್ಯಾತ ಲೇಖಕ ಹಾಗೂ ಸಿನಿಮಾ ವಿಮರ್ಶಕ ಜೋಗಿ ಅವರು ಕೃತಿಗಳ ಬಿಡುಗಡೆ ಮಾಡುವರು ಎಂದರು.

ಆಧುನಿಕ ಮಹಿಳಾ ಕಾವ್ಯ – ಪುರಾಣ ಸ್ತ್ರೀ ದರ್ಶನ ಕುರಿತು ವಿಶ್ರಾಂತ ಪ್ರಾಂಶುಪಾಲ ಪ್ರೊ.ಜಿ.ಟಿ.ವೀರಪ್ಪ ಮಾತನಾಡುವರು. ಸಿಗ್ನೇಚರ್ ಕೃತಿ ಕುರಿತು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರಗೌಡ  ಮಾತನಾಡುವರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರೊ.ಜಿ.ಟಿ.ವೀರಪ್ಪ ಹಾಗೂ ಲೇಖಕಿ ಡಾ.ಸುಮಾರಾಣಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!