ಮಂಡ್ಯ ನಗರದ ಪ್ರತಿಯೊಬ್ಬ ವರ್ತಕರು ಉದ್ದಿಮೆ ಪರವಾನಗಿ ಪಡೆದು ಅಥವಾ ನವೀಕರಿಸಿಕೊಂಡು ವ್ಯಾಪಾರ ನಡೆಸಬೇಕೆಂದು ವರ್ತಕರಲ್ಲಿ ಮಂಡ್ಯ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಯಿತು.
ಮಂಡ್ಯ ನಗರದ 10ನೇವಾರ್ಡ್ ನಲ್ಲಿ ನಗರಸಭೆಯ ಆರೋಗ್ಯ ಶಾಖೆ ವತಿಯಿಂದ ಉದ್ದಿಮೆ ಪರವಾನಗೆ ಪಡೆಯದೆ ಹಾಗೂ ನವೀಕರಣ ಮಾಡದೆ ವ್ಯಾಪಾರ ನಡೆಸುತ್ತಿದ್ದ ಅಂಗಡಿಯ ಮಾಲೀಕರಿಗೆ ನೋಟಿಸ್ ನೀಡಿ ಮಾತನಾಡಿದ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಲುವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ಉದ್ದಿಮೆ ನಡೆಸುತ್ತಿರುವ ಮಾಲೀಕರು ಕೂಡಲೇ ಪರವಾನಿಗೆ ಪಡೆದು ಹಾಗೂ ನವೀಕರಿಸಿಕೊಂಡು ವ್ಯಾಪಾರ ಮಾಡಿ ಎಂದು ಜಾಗೃತಿ ಮೂಡಿಸಿದರು.
ನೋಟೀಸ್ ನೀಡಿದ ಏಳು ದಿನಗಳ ಒಳಗೆ ಪರವಾನಿಗೆ ಪಡೆಯಿರಿ, ಒಂದು ವೇಳೆ ನೀವು ಪರವಾನಿಗೆ ಪಡೆಯದೆ ಹಾಗೇ ಮುಂದುವರೆದರೆ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಪೌರಾಯುಕ್ತರು ಹಾಗೂ ಪರಿಸರ ಇಂಜಿನಿಯರ್ ಅವರ ಸೂಚನೆ ಮೇರೆಗೆ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಮಂಡ್ಯ ನಗರದ ಅಭಿವೃದ್ಧಿಗೆ ವರ್ತಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಶಂಕರ್, ಅಶ್ವಥ್, ಮೇಸ್ತ್ರಿಗಳಾದ ಮುತ್ತಾಲಯ್ಯ, ನಂಜುಂಡ, ರಾಜು,
ಮಹಾದೇವು ಇತರರು ಹಾಜರಿದ್ದರು