Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಚಮ್ಮದೇವಿ ದೇವಾಲಯಕ್ಕೆ ಆರ್ಥಿಕ ನೆರವು ನೀಡಿದ ಬಿ.ಆರ್.ರಾಮಚಂದ್ರು

ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಂಚಮ್ಮ ದೇವಿಯ ದೇವಾಲಯ ನಿರ್ಮಾಣಕ್ಕೆ ಶ್ರೀ ಶಂಭು ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್ ರಾಮಚಂದ್ರು 1,11,000ರೂ (ಒಂದು ಲಕ್ಷದ ಹನ್ನೊಂದು ಸಾವಿರ ರೂ) ಗಳ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕಲ್ಲಹಳ್ಳಿಯ ಮುಖಂಡರ ಪರಿಶ್ರಮದಿಂದ ಭವ್ಯವಾದ ಮಂಚಮ್ಮದೇವಿ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತೋಷ ತಂದಿದೆ.ಕಲ್ಲಹಳ್ಳಿ ಮುಖಂಡರ ಕೋರಿಕೆಯಂತೆ ನಾನು ಕೂಡ ದೇವಾಲಯದ ನಿರ್ಮಾಣಕ್ಕೆ ನನ್ನ ಕೈಲಾದ ಮಟ್ಟಿಗೆ ನೆರವು ನೀಡಿದ್ದೇನೆ.ಇಲ್ಲಿನ ಜನರ ಪ್ರೀತಿ-ವಿಶ್ವಾಸ ನನ್ನ ಮೇಲಿರಲಿ ಎಂದರು.

ಈ ಸಂದರ್ಭದಲ್ಲಿ ಕಲ್ಲಹಳ್ಳಿ ಮುಖಂಡರಾದ ರಾಮಲಿಂಗು,ಆನಂದ್,ಕೆ.ಸಿ.ರವೀಂದ್ರ,ರಾಜಪ್ಪ, ಶಂಕರಣ್ಣ,ನಾಗಲಿಂಗಣ್ಣ, ಪ್ರದೀಪ್, ಮಂಜು, ಹೇಮಂತ್ ಸೋಲಿ, ತಾಂಡವ, ಯೋಗಾನಂದ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!