ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಂಚಮ್ಮ ದೇವಿಯ ದೇವಾಲಯ ನಿರ್ಮಾಣಕ್ಕೆ ಶ್ರೀ ಶಂಭು ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್ ರಾಮಚಂದ್ರು 1,11,000ರೂ (ಒಂದು ಲಕ್ಷದ ಹನ್ನೊಂದು ಸಾವಿರ ರೂ) ಗಳ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕಲ್ಲಹಳ್ಳಿಯ ಮುಖಂಡರ ಪರಿಶ್ರಮದಿಂದ ಭವ್ಯವಾದ ಮಂಚಮ್ಮದೇವಿ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತೋಷ ತಂದಿದೆ.ಕಲ್ಲಹಳ್ಳಿ ಮುಖಂಡರ ಕೋರಿಕೆಯಂತೆ ನಾನು ಕೂಡ ದೇವಾಲಯದ ನಿರ್ಮಾಣಕ್ಕೆ ನನ್ನ ಕೈಲಾದ ಮಟ್ಟಿಗೆ ನೆರವು ನೀಡಿದ್ದೇನೆ.ಇಲ್ಲಿನ ಜನರ ಪ್ರೀತಿ-ವಿಶ್ವಾಸ ನನ್ನ ಮೇಲಿರಲಿ ಎಂದರು.
ಈ ಸಂದರ್ಭದಲ್ಲಿ ಕಲ್ಲಹಳ್ಳಿ ಮುಖಂಡರಾದ ರಾಮಲಿಂಗು,ಆನಂದ್,ಕೆ.ಸಿ.ರವೀಂದ್ರ,ರಾಜಪ್ಪ, ಶಂಕರಣ್ಣ,ನಾಗಲಿಂಗಣ್ಣ, ಪ್ರದೀಪ್, ಮಂಜು, ಹೇಮಂತ್ ಸೋಲಿ, ತಾಂಡವ, ಯೋಗಾನಂದ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.