ನಮ್ಮಲ್ಲಿ ಯಾರೂ ಕಮಿಷನ್ ಕೇಳಿಲ್ಲ, ಉದ್ವೇಗದಲ್ಲಿ ಮಾತನಾಡಿದ್ದೆ ಅಷ್ಟೇ, ಡಿ ಕೆ ಶಿವಕುಮಾರ್ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಗುತ್ತಿಗೆದಾರ ಗೌತಮ್ ಹೇಳಿಕೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ನಾಯಕರಾದ ಅಶ್ವಥ್ ನಾರಾಯಣ್, ಸಿ.ಟಿ.ರವಿ, ಆ.ಅಶೋಕ್ ಅವರಿಗೆ ತೀವ್ರ ಮುಖಭಂಗವಾಗಿದೆ.
ರಾಜಕೀಯ ಮಾಡಲು ಗುತ್ತಿಗೆದಾರರನ್ನು ಬಳಸಿಕೊಂಡ @RAshokaBJP, @drashwathcn , @CTRavi_BJP, @BasanagoudaBJP ಹಾಗೂ ಇತರ ಬಿಜೆಪಿ ನಾಯಕರು ಈಗ ಉತ್ತರ ಕೊಡಲಿ.
– @DKShivakumar pic.twitter.com/rV0kOTQGKo
— Karnataka Congress (@INCKarnataka) August 14, 2023
“>
ಹೊಸ ಸರ್ಕಾರದಲ್ಲಿ ಯಾರೂ ಕಮಿಷನ್ ಕೇಳಿಲ್ಲ – ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಡಿ ಕೆ ಶಿವಕುಮಾರ್ ಅವರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ – ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘ, ಬಿಜೆಪಿ ಸರ್ಕಾರದ 40% ಲೂಟಿಯ ತನಿಖೆಯ ಹಾದಿ ತಪ್ಪಿಸಲು ಸಲ್ಲದ ಆರೋಪ ಮಾಡುವ ಬಿಜೆಪಿ ನಾಯಕರು ನೈತಿಕತೆ ಇದ್ದರೆ ತಮ್ಮ ಸುಳ್ಳು ಆರೋಪಕ್ಕೆ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ನನ್ನ ಭಾವೋದ್ವೇಗದ ಮಾತುಗಳನ್ನು ವಿರೋಧ ಪಕ್ಷದ ನಾಯಕರು ರಾಜಕೀಯ ದಾಳ ಮಾಡಿಕೊಂಡಿದ್ದಾರೆ, ಇದನ್ನು ನಿಲ್ಲಿಸಬೇಕು.
ಗುತ್ತಿಗೆದಾರನ ಉಧ್ವೇಗದ ಮಾತುಗಳನ್ನ ಮುಂದಿಟ್ಟು ರಾಜಕೀಯ ಮಾಡುತ್ತಿರುವ @BJP4Karnataka ನಾಯಕರು ಈಗ ಅದೇ ಗುತ್ತಿಗೆದಾರನ ಮಾತಿಗೆ ಬೆಲೆ ಕೊಡುವರೇ?
“ಪ್ರಮಾಣ ರಾಜಕೀಯ“ ಮಾಡುತ್ತಿರುವ ಬಿಜೆಪಿ ನಾಯಕರು ಈಗ @DKShivakumar… pic.twitter.com/GlvPfbOwNs
— Karnataka Congress (@INCKarnataka) August 14, 2023
“>
ನನ್ನ ಭಾವೋದ್ವೇಗದ ಮಾತುಗಳನ್ನು ವಿರೋಧ ಪಕ್ಷದ ನಾಯಕರು ರಾಜಕೀಯ ದಾಳ ಮಾಡಿಕೊಂಡಿದ್ದಾರೆ, ಇದನ್ನು ನಿಲ್ಲಿಸಬೇಕು. ಗುತ್ತಿಗೆದಾರನ ಉದ್ವೇಗದ ಮಾತುಗಳನ್ನ ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರು ಈಗ ಅದೇ ಗುತ್ತಿಗೆದಾರನ ಮಾತಿಗೆ ಬೆಲೆ ಕೊಡುವರೇ? “ಪ್ರಮಾಣ ರಾಜಕೀಯ“ ಮಾಡುತ್ತಿರುವ ಬಿಜೆಪಿ ನಾಯಕರು ಈಗ ಡಿಕೆ ಶಿವಕುಮಾರ್ ಅವರ ಕ್ಷಮೆ ಕೇಳಲಿ ಅಥವಾ ಅದೇ ಅಜ್ಜಯ್ಯನ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ರಾಜಕೀಯ ಮಾಡಲು ಗುತ್ತಿಗೆದಾರರನ್ನು ಬಳಸಿಕೊಂಡ ಬಿಜೆಪಿ ನಾಯಕರಾದ ಆರ್. ಅಶೋಕ್, ಅಶ್ವಥ್ ನಾರಾಯಣ್, ಸಿ.ಟಿ.ರವಿ ಹಾಗೂ ಬಸವನಗೌಡ ಯತ್ನಾಳ್ ಈಗ ರಾಜ್ಯದ ಜನರಿಗೆ ಉತ್ತರ ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.