ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಪದೋನ್ನತಿ ಪಡೆದ ಮಂಡ್ಯ ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ಟಿ.ಶ್ರೀನಿವಾಸ್ ಅವರನ್ನು ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಅಭಿನಂದಿಸಿ ಬೀಳ್ಕೋಡಲಾಯಿತು.
ಮಂಡ್ಯ ನಗರದ ಕಲ್ಲಹಳ್ಳಿ ಹೊಂಬಾಳೆ ಪಂಕ್ಷನ್ ಹಾಲ್ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ
ಸಿ.ತ್ಯಾಗರಾಜು, ಇಂಜಿನಿಯರ್ ಶ್ರೀನಿವಾಸ್ ಅವರು ಇಂಜಿನಿಯರ್ ಆಗುವ ಮೊದಲು ಪುರಸಭೆ ಸದಸ್ಯರಾಗಿ ಕೆಲಸ ಮಾಡಿದ್ದರು. ಇಂಜಿನಿಯರ್ ಕೆಲಸ ಸಿಕ್ಕಿದ ನಂತರ ಅವರು ಉತ್ತಮವಾಗಿ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಮುಂಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ ಅಲ್ಲಿಯೂ ಜನಾನುರಾಗಿಯಾಗಿ ಸ್ಪಂದಿಸುವ ಮೂಲಕ ಉತ್ತಮ ರೀತಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಶ್ರೀನಿವಾಸ್, ಸತತವಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಳೆದ 12 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡುವಾಗ ಗುತ್ತಿಗೆದಾರರು ಸಹಕರಿಸಿದ್ದೀರಿ. ಮೇಲಾಧಿಕಾರಿಗಳು ನನ್ನ ಲೋಪ ದೋಷಗಳನ್ನು ಸರಿಪಡಿಸಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಅವರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ನನ್ನ ಮೇಲೆ ವಿಶ್ವಾಸವಿಟ್ಟು ಗುತ್ತಿಗೆದಾರರು ಸನ್ಮಾನಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯತಿರಾಜು, ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ, ಜಿ.ಬಿ.ಭೈರವ, ಉದ್ಯಮಿ ಸಿ.ಕೆ.ದೇವರಾಜು, ಮನ್ ಮುಲ್ ನಿರ್ದೇಶಕ ಶಿವಪ್ಪ,
ಆರ್’ಎಪಿಸಿಎಸ್ ಅಧ್ಯಕ್ಷ ಯು.ಸಿ. ಶೇಖರ್, ದೇವರಾಜು,ಕೆ.ಸಿ. ಪ್ರಶಾಂತಬಾಬು, ನವೀನ್ ಕುಮಾರ್, ಎಇಇ ಗಣೇಶ ಹೆಗ್ಡೆ, ಸಹಾಯಕ ಇಂಜಿನಿಯರ್ ನಾಗರಾಜು,ಶ್ರೀಧರ್, ಮಂಜುನಾಥ್,