ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ಸಂಯೋಜಕರನ್ನಾಗಿ ಪಾಂಡವಪುರದ ಎನ್.ಕೃಷ್ಣೇಗೌಡ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ನೇಮಕ ಮಾಡಿದ್ದಾರೆ.
ನಾಗಮಂಗಲ ಉಸ್ತುವಾರಿ ನೇಮಕ
ನಾಗಮಂಗಲ ವಿಧಾನಸಭಾದ ಕ್ಷೇತ್ರ ಉಸ್ತುವಾರಿಯನ್ನಾಗಿ ಪಾಂಡವಪುರ ಕೋ.ಪು.ಗುಣಶೇಖರ್ ಅವರನ್ನು ನೇಮಕ ಮಾಡಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಳೀಯ ನಾಯಕರ ಸಹಕಾರದೊಂದಿಗೆ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ.