ಮಂಡ್ಯ ನಗರದ ಕಲ್ಲಹಳ್ಳಿ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸುವ ಮೂಲಕ 3ನೇ ದಿನದ ಅಭಿಯಾನಕ್ಕೆ ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತಿಳಿದು ಸಾಕಷ್ಟು ಗ್ರಾಮ, ಬಡಾವಣೆಗಳ ಜನರು ಕರೆ ಮಾಡಿ, ಅಧಿಕಾರಿಗಳು ಗುಂಡಿ ಮುಚ್ಚಿಸುತ್ತಿಲ್ಲ. ನೀವಾದರೂ ಬಂದು ನಮ್ಮೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಎಂದು ಕೇಳಿ ಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇಂದು ನಗರದ ಕಲ್ಲಹಳ್ಳಿಯಲ್ಲಿ ಬಹುತೇಕ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ. ನನ್ನ ವೈಯಕ್ತಿಕ ಹಣದಲ್ಲಿ ಸೇವಾ ಕಾರ್ಯ ಮಾಡುತ್ತಿದ್ದೇನೆ. ವಾಹನ ಸವಾರರು, ಪಾದಾಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರ ಪ್ರಾಣ ರಕ್ಷಣೆಗಾಗಿ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಮತ್ತಷ್ಟು ಕೆಲಸ-ಕಾರ್ಯಗಳಿಗೆ ಉತ್ತೇಜನ ನೀಡಿದೆ.ನಾನು ಯಾವುದೇ ದುರಾಲೋಚನೆ ಇಲ್ಲದೆ ಸೇವಾ ಕಾರ್ಯ ನಡೆಸುತ್ತಿದ್ದೇನೆ ಎಂದರು.
ಅಭಿಯಾನದಲ್ಲಿ ಸ್ಥಳೀಯ ಮುಖಂಡರಾದ ವೆಂಟೇಶ್, ಅನಿಲ್ಗೌಡ, ಶಶಿ, ಚಂದ್ರು ಮತ್ತಿತರರು ಹಾಜರಿದ್ದರು,