ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಕೊಪ್ಪ ಇವರ ವತಿಯಿಂದ ಸರ್ವಧರ್ಮದವರ ಸಮ್ಮೇಳನದ ಸಮ್ಮಿಲನ ಕಾರ್ಯಕ್ರಮವನ್ನು ಆ.20ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಮದ್ದೂರು ತಾಲ್ಲೂಕಿನ ಕೊಪ್ಪದ ಯಂಬಾರ್ಜಿಯಾರ್ ಮಹಾತ್ಮರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರೀಸ್ ಆಶ್ರಮದ ತಿಲಕವತಿ ಧರ್ಮಲಿಂಗಂ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಲಿಮಠ ಮಹಾಸಂಸ್ಥಾನದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಜೀ ಸಮ್ಮೇಳನ ಉದ್ಘಾಟಿಸುವರು. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆಧ್ಯಕ್ಷತೆ ವಹಿಸುವರು ಎಂದರು.
ಗೌರವಾನ್ವಿತ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ. ಕುಮಾರ, ಎಸ್ಪಿ ಯತೀಶ್, ಎಡಿಸಿ ಡಾ.ಹೆಚ್.ಎಲ್. ನಾಗರಾಜ್, ಭಾಗವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾಕುಮಾರೀಸ್ ಮೈಸೂರು ವಿಭಾಗೀಯ ಸಂಚಾಲಕಿ ಲಕ್ಷ್ಮೀ ಅಕ್ಕ, ಮಂಡ್ಯ ಚರ್ಚ್ ನ ಡಾ.ಲಾರ್ಡ್ ಪ್ರಸಾದ್, ನಟ, ನಿರ್ಮಾಪಕ ಎಸ್. ಧರ್ಮಲಿಂಗಂ, ನಟಿ ರಕ್ಷಿತ ಹಾಗೂ ಪ್ರೇಮ್, ನಿರ್ದೇಶಕ ನಿಖಿಲ್ ಮಂಜುಲಿಂಗಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಸರ್ವೋದಯ ಕಾಲೇಜು ಅಧ್ಯಕ್ಷ ವಿವೇಕಾನಂದ, ಜೈನ ಸಮಾಜದ ಶಾಂತಿ ಪ್ರಸಾದ್, ಸಿಖ್ ಧರ್ಮದ ಮುಖಂಡ ಹರ್ಬನ್ಸಿಂಗ್, ಮುಸ್ಲಿಂ ಮುಖಂಡ ರಿಜ್ವಾನ್ ಅಹಮದ್, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಹಿರಿಯ ಪತ್ರಕರ್ತ ಕೆ.ಸಿ.ಮಂಜುನಾಥ್ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಬಿ.ಕೆ.ಈಶ್ವರಿ, ರತ್ನಕ್ಕ, ಬಿ.ಕೆ.ರಾಘವೇಂದ್ರ ಹಾಗೂ ಅನಂತರಾಮಣ್ಣ ಉಪಸ್ಥಿತರಿದ್ದರು.