ದಲಿತರು ಬಿಜೆಪಿಯ ಸುಳ್ಳಿಗೆ ಬಲಿಯಾಗಬೇಡಿ. ಮೀಸಲಾತಿ ವಿಚಾರದಲ್ಲಿ ಅವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಜನಾದೇಶದ ಸರ್ಕಾರವಲ್ಲ, ಆಪರೇಷನ್ ಕಮಲದ ಸರ್ಕಾರ. ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ. ನೀವು ನಮಗೆ ಆಶೀರ್ವಾದ ಮಾಡಿ ಶಕ್ತಿ ತುಂಬಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನೀವು ಬಿಜೆಪಿಯ ಸುಳ್ಳಿಗೆ ಬಲಿಯಾಗಬೇಡಿ. ಮೀಸಲಾತಿ ವಿಚಾರದಲ್ಲಿ ಅವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ.
ಇದು ಜನಾದೇಶದ ಸರ್ಕಾರವಲ್ಲ, ಆಪರೇಷನ್ ಕಮಲದ ಸರ್ಕಾರ.
ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ.
ನೀವು ನಮಗೆ ಆಶೀರ್ವಾದ ಮಾಡಿ ಶಕ್ತಿ ತುಂಬಬೇಕು ಎಂದು ವಿನಂತಿಸುತ್ತೇನೆ.
– @DKShivakumar pic.twitter.com/3srGbghfqA— Karnataka Congress (@INCKarnataka) January 8, 2023
“>
ಚಿತ್ರದುರ್ಗದಲ್ಲಿ ಭಾನುವಾರ ನಡೆದ ದಲಿತರ ಬೃಹತ್ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಸಂವಿಧಾನವನ್ನು ಉಳಿಸಿಕೊಂಡು ದೇಶವನ್ನು ಒಂದುಗೂಡಿಸಬೇಕು. ಬಿಜೆಪಿಯವರು ಭಾವನಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಜನರ ಬದುಕಿನ ಮೇಲೆ ದೇಶ ಕಟ್ಟಲು ಮುಂದಾಗಿದೆ ಎಂದರು.
ಕಾಂಗ್ರೆಸ್ ನಾಯಕ ಡಾ. ಪರಮೇಶ್ವರ್ ಅವರು ಇಂದು ದಶ (ಹತ್ತು) ಘೋಷಣೆ ಮಾಡಿದ್ದು, ಪಕ್ಷದ ಅಧ್ಯಕ್ಷನಾಗಿ ಈ ಘೋಷಣೆಗಳಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳುತ್ತಿದ್ದೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮಾಜದವರು ಅಧಿಕಾರಕ್ಕೆ ಬಂದಂತೆ. ಈ ಐಕ್ಯತಾ ಸಮಾವೇಶ, ಇಡೀ ದೇಶಕ್ಕೆ ಈ ಸಂದೇಶ ರವಾನಿಸುತ್ತಿದೆ. ಈ ಐಕ್ಯತಾ ಸಮಾವೇಶ, ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆಯ ಉದ್ದೇಶಕ್ಕೆ ಪೂರಕವಾಗಿದೆ ಎಂದು ಹೇಳಿದರು.
SC, ST ಸಮುದಾಯಗಳ ಒಟ್ಟಾರೆ ಕಲ್ಯಾಣಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷವು ಇಂದು ಚಿತ್ರದುರ್ಗದ ಐಕ್ಯತಾ ಸಮಾವೇಶದಲ್ಲಿ 10 ಘೋಷಣೆಗಳನ್ನು ಮಾಡಿದೆ. ಇದು ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳಿಗೆ ನಮ್ಮ ಭರವಸೆಗಳಾಗಿದೆ. ಕಾಂಗ್ರೆಸ್ ಶೋಷಿತರ ಪರ ನಿಲ್ಲುತ್ತದೆ, ಹೋರಾಡುತ್ತದೆ ಮತ್ತು ಸಮುದಾಯಗಳ ಭರವಸೆಗಳನ್ನು ಈಡೇರಿಸುತ್ತದೆ ಎಂದು ಭರವಸೆ ನೀಡಿದರು.