ಮಂಡ್ಯ ನಗರದ ಕಲ್ಲಹಳ್ಳಿ ನಿವಾಸಿ ಕೆ.ಬಿ.ಜವರೇಗೌಡ ಅಲಿಯಾಸ್ ತಮ್ಮಯ್ಯ(73) ಇಂದು ಸಂಜೆ 6.30 ರಲ್ಲಿ ನಿಧನರಾಗಿದ್ದಾರೆ.
ಧರ್ಮಶ್ರೀ ಸಮುದಾಯ ಭವನದ ಪಾಲುದಾರರಾಗಿದ್ದ ಮೃತ ಕೆ.ಬಿ.ಜವರೇಗೌಡ ಅವರು ಗ್ರಾಮದ ಲೇಟ್ ಗೊಂಬೆ ಬೋರಿ ಬೋರೇಗೌಡರ ಸುಪುತ್ರರು. ಮೃತರು ಪತ್ನಿ ರತ್ನಮ್ಮ, ಯುವ ಕಾಂಗ್ರೆಸ್ ಮುಖಂಡ ಅನೂಪ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜ.19 ಗುರುವಾರದಂದು ಬೆಳಿಗ್ಗೆ 10.30 ಕ್ಕೆ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.