ಉತ್ತರ ಕರ್ನಾಟಕದ, ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಕೊಲೆಬೆದರಿಕೆ ಪತ್ರ ಬರುತ್ತಿರುವವರನ್ನು ಕೂಡಲೇ ಬಂಧಿಸಬೇಕೆಂದು ಮಂಡ್ಯ ಜಿಲ್ಲಾ ಲಿಂಗಾಯಿತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಬೆಟ್ಟಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಸ್ವಾಮೀಜಿಯವರು ಬಸವಾದಿ ಶರಣರ ತತ್ವ ಆದರ್ಶಗಳನ್ನ ಜನತೆಗೆ ಮನಮುಟ್ಟುವಂತೆ ತಿಳಿಸುತ್ತಿದ್ದು ಮೂಢನಂಬಿಕೆ ವೈದಿಕ ಧರ್ಮವನ್ನು ವಿರೋಧಿಸುವುದು ತಪ್ಪೇ,?, ಮಾನಸಿಕ ಭಯೋತ್ಪಾದಕರ ವಿರುದ್ಧ ಮಾತನಾಡುವುದು ತಪ್ಪೇ?, ಧರ್ಮ ಜಾಗೃತಿ ಮೂಡಿಸಿ,ಧರ್ಮದ ಮಹತ್ವವನ್ನು ಜನತೆಗೆ ತಿಳಿಸುತ್ತಾ ಸಮಾಜವನ್ನು ಸನ್ಮಾರ್ಗಕ್ಕೆ ತರಲು ಶ್ರಮಿಸುತ್ತಿರುವ ಸ್ವಾಮೀಜಿಯವರ ವಿಚಾರಗಳು ಜನಪರವಾಗಿವೆ, ಇದನ್ನ ಸಹಿಸದ ಪಟಪದ್ರ ಹಿತಶಕ್ತಿಗಳ ಕುತಂತ್ರಿಗಳ ಕೈವಾಡದಿಂದ ಬೆದರಿಕೆ ಹಾಕುತ್ತಿರುವ ಈ ವಿಚಾರವನ್ನು ಸಂಬಂಧಪಟ್ಟ ಪೋಲಿಸ್ ಇಲಾಖೆ ಸರ್ಕಾರ ಕೂಡಲೇ ಎಚ್ಚೆತ್ತು ತಪ್ಪಿಸಸ್ಥರನ್ನು ಇವರಿಗೆ ಕುಮ್ಮಕ್ಕು ನೀಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಶಿಸ್ತಿನ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಜೀವ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಿ, ಗಡಿಪಾರು ಮಾಡುವಂತಹ ಶಿಕ್ಷೆ ವಿಧಿಸಿ ಸ್ವಾಮೀಜಿ ಅವರಿಗೆ ಹಾಗೂ ಕೋಟ್ಯಾಂತರ ಭಕ್ತರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ, ಸ್ವಾಮೀಜಿ ಅವರಿಗೆ ಪ್ರಾಣ ರಕ್ಷಣೆಗಾಗಿ ಸೂಕ್ತ ಭದ್ರತೆಯನ್ನು ಸರ್ಕಾರ ವ್ಯವಸ್ಥೆ ಮಾಡಬೇಕು, ಇಂತಹ ಕೃತ್ಯಗಳು ಮರು ಕಳುಹಿಸಿದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಬಸವ ತತ್ವಗಳ ಆದರ್ಶಗಳನ್ನ ಪ್ರಚಾರ ಮಾಡುತ್ತಿದ್ದ ಸಾಹಿತಿ ಕಲ್ಬುರ್ಗಿಯವರನ್ನು ಹಾಗೂ ಗೌರಿ ಲಂಕೇಶ್ ರವರನ್ನು ಹತ್ಯೆ ಮಾಡಿದ್ದು, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಸರ್ಕಾರ ಪತ್ತೆ ಹಚ್ಚದೆ ವಿಫಲವಾಗಿವೆ, ಈಗಲಾದರೂ ಸರ್ಕಾರ ಕೂಡಲೇ ಇದರ ಬಗ್ಗೆ ಶಿಸ್ತನ ಕ್ರಮ ಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.