Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನೋಟಿನ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಲು ಯತ್ನಿಸಿದನಿಗೆ ಧರ್ಮದೇಟು

ನೋಟಿನ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಲು ಮುಂದಾದ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿಗೆ ಸಾರ್ವಜನಿಕರು ಧರ್ಮಧೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಡ್ಯದ ಉಪನೋಂದಣಿ ಕಚೇರಿ ಬಳಿ ನಡೆದಿದೆ.

ಮಂಡ್ಯದ ಕಾಳೇನಹಳ್ಳಿ ಗ್ರಾಮದ ಉಮೇಶ್ ಎಂಬುವವರು ತಮ್ಮ ಪ್ರಾಪರ್ಟಿ ಮಾರಾಟ ಮಾಡಲು ಮುಂದಾಗಿದ್ದರು.

ಹೀಗಾಗಿ ಮಂಡ್ಯ ನಗರದ ಸಬ್ದರಿಯಬಾದ್ ನಿವಾಸಿ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿ ಪ್ರಾಪರ್ಟಿ ಖರೀದಿ ಮಾಡಲು ಮುಂದಾಗಿದ್ದರು. ಹೀಗಾಗಿ ಶುಕ್ರವಾರ ನಗರದ ಉಪ ನೊಂದಣಿ ಕಚೇರಿಗೆ ಎರಡೂ ಕಡೆಯವರು ಆಗಮಿಸಿದ್ದರು.

ಜಾಹೀರಾತು

ಈ ವೇಳೆ ಮೊದಲೇ ಮಾತುಕತೆ ನಡೆಸಿದಂತೆ ಸಯ್ಯದ್ ಆರುನ್, ನೊಂದಣಿ ಬಳಿಕ ಉಳಿಕೆ ಹಣ 30 ಲಕ್ಷ ಕೊಡೋದಾಗಿ ಹೇಳಿ ನೋಟಿನ ಮಧ್ಯೆ ಬಿಳಿ ಹಾಳೆಯ ಕಂತೆಯನ್ನ ಇಟ್ಟು ಯಾಮಾರಿಸಿದ್ದಾರೆ. ಇದರಿಂದ ಉಪನೋಂದಣಿ ಕಚೇರಿ ಬಳಿ ಇದ್ದ ಸಾರ್ವಜನಿಕರು ಆರುನ್ ನನ್ನು ಹಿಡಿದು ಥಳಿಸಿದ್ದು, ಮಂಡ್ಯದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!