Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಥಿಲಗೊಂಡ ವಿದ್ಯುತ್ ಕಂಬ ಬದಲಾಯಿಸಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರ: ಚೆಸ್ಕಾಂ ಎಇಇ ಮಹಾದೇವ್

ಶಿಥಿಲಗೊಂಡ ವಿದ್ಯುತ್ ಕಂಬ ಬದಲಾಯಿಸಿ, ಹೊಸ ಕಂಬ ಹಾಕಿದ ನಂತರವೂ ಖಾಸಗಿ ಸುದ್ದಿ ವಾಹಿನಿಯೊಂದು ಕಂಬ ಬದಲಾವಣೆ ಮಾಡಿಲ್ಲ ಎಂದು ಸುದ್ದಿ ಬಿತ್ತರ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಚೆಸ್ಕಾಂ ಮಂಡ್ಯ ಉಪ ವಿಭಾಗದ ಎಇಇ ಎಚ್.ಇ.ಮಹಾದೇವ್ ಸ್ಪಷ್ಟನೆ ನೀಡಿದ್ದಾರೆ.

ಬದಲಾವಣೆಗೊಂಡ ಕಂಬ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಡ್ಯ ನಗರದ ನಂದ ಚಿತ್ರಮಂದಿರದ ಹಿಂಭಾಗದಲ್ಲಿರುವ ಇಂದಿರಾ ಬಡಾವಣೆಯಲ್ಲಿ ಶಿಥಿಲಗೊಂಡಿದ್ದ ವಿದ್ಯುತ್ ಕಂಬವನ್ನು ನ.5 ರಂದು ಬದಲಾವಣೆ ಮಾಡಿ ಹೊಸ ಕಂಬವನ್ನು ಹಾಕಲಾಗಿದೆ.

ವಾಸ್ತವ ಸಂಗತಿ ಹೀಗಿದ್ದರೂ ಖಾಸಗಿ ಸುದ್ದಿ ವಾಹಿನಿಯಲ್ಲಿ ನ.7 ರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬ ಬದಲಾವಣೆಯಾಗದಿರುವ ಬಗ್ಗೆ ಸುದ್ದಿ ಬಿತ್ತರವಾಗಿರುತ್ತದೆ. ಇದು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದಿರುವ ಅವರು, ಇಂತಹ ಶಿಥಿಲಗೊಂಡ ವಿದ್ಯುತ್ ಕಂಬಗಳು ಕಂಡು ಬಂದರೆ ತಕ್ಷಣ ಚೆಸ್ಕಾಂ ಗಮನಕ್ಕೆ ತಂದರೆ ಅದನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!