ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಮುಖಂಡ ಹಾಗು ಪುರಸಭಾ ಸದಸ್ಯ ಬಸ್ ಸಂತೋಷ್ಕುಮಾರ್ ರವರ ಜನ್ಮದಿನವನ್ನು ಅವರ ಅಭಿಮಾನಿಗಳ ಬಳಗದ ವತಿಯಿಂದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಸ್ ಸಂತೋಷ್ಕುಮಾರ್ ಅಭಿಮಾನಿ ಬಳಗದ ಮಡುವಿನಕೋಡಿ ಎನ್.ಜಿ.ಸಾಗರ್ ಮಾತನಾಡಿ, ಪ್ರತಿನಿತ್ಯವೂ ಸಾರ್ವಜನಿಕರ ಮತ್ತು ರೈತಾಪಿ ವರ್ಗಗಳಿಗೆ ಅನುಕೂಲವಾಗುವ ಸೇವೆ ಸಲ್ಲಿಸುವ ಸಂತೋಷ್ ಕುಮಾರ್ ಅವರ ಜನ್ಮದಿನವನ್ನು ಅವರ ಅಭಿಮಾನಿ ಬಳಗದ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತದೆ.
ಆದರೆ ಯಾವುದೇ ಆಡಂಬರಕ್ಕೆ ಅವಕಾಶ ನೀಡದೆ ಈ ವರ್ಷವೂ ಕೂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್ ನೀಡುವ ಮೂಲಕ ಸರಳವಾಗಿ ಜನ್ಮದಿನವನ್ನ ಆಚರಿಸುತ್ತಿದ್ದೇವೆ.
ಈ ಹಿಂದೆ ಕೂಡ ಉದ್ಯಾನವನದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ, ತಮ್ಮ ಜಮೀನಿನ ಅಕ್ಕಪಕ್ಕದ ಜಮೀನಿನ ರೈತರ ಬೋರ್ ವೆಲ್ ಗಳಿಗೆ ಅನುಕೂಲವಾಗಲಿ ಎಂಬ ಹಿತದೃಷ್ಟಿಯಿಂದ ಕೆರೆ ನಿರ್ಮಾಣ ಮಾಡಿ ನೀರು ತುಂಬಿಸುವ ಕೆಲಸ ಮಾಡಿದ್ದಾರೆ. ಇಂತಹ ಸಮಾಜಸೇವಾ ಕಾರ್ಯಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ವೆಂಕಟರಾಮೇಗೌಡ,ಗದ್ದೆಹೊಸೂರು ದರ್ಶನ್,ಹರಿಹರಪುರ ಮೋಹನ್, ಕುಂದೂರು ರಾಜು,ಬಂಡಿಹೊಳೆ ದರ್ಶನ್ ಕತ್ತರಘಟ್ಟ ಮಹೇಶ್, ಚಂದ್ರಶೇಖರ್,ಹೆಮ್ಮನಹಳ್ಳಿ ತಮ್ಮಣ್ಣ,ಹರಿಹರಪುರ ಜಯರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.