ಬಿಜೆಪಿ-ಜೆಡಿಎಸ್’ಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ, ಅದಕ್ಕಾಗಿಯೇ ಇಲ್ಲಸಲ್ಲದ ವಿಚಾರಗಳನ್ನು ಇಟ್ಟುಕೊಂಡು ಪ್ರತಿಭಟನೆಯ ನಾಟಕವಾಡುತ್ತಿವೆ, ಅಂತಿಮವಾಗಿ ಅವರಿಗೆ ಇದರಿಂದ ಯಾವುದೇ ಫಲ ಸಿಗುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ದೊಡ್ಡ ದೊಡ್ಡ ಹಗರಣವಾಗಿದೆ ತನಿಖೆ ಮಾಡಿ ಬಿಲ್ ಕೊಡ್ತೇವೆ, ಜೆಡಿಎಸ್-ಬಿಜೆಪಿ ಪಾಪಾ ಅವರಿಗೆ ಏನು ಹೇಳುವುದಕ್ಕಾಗಲ್ಲ. ಗ್ಯಾರಂಟಿ ಕೊಟ್ಟಿದ್ದೇವೆ ಅದಕ್ಕೆ ಅವರಿಗೆ ಟೀಕೆ ಮಾಡಲು ಬೇರೆ ವಿಚಾರಗಳು ಸಿಕ್ತಿಲ್ಲ, ಆದ್ದರಿಂದ ಸುಳ್ಳು ಪತ್ರ ಬರೆಯುವ ಕೆಲಸಕ್ಕೆ ಮಾಡಿದ್ದಾರೆ, ಆ ಪತ್ರ ನಕಲಿ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಸರ್ಕಾರ ಆಡಳಿತದಲ್ಲಿ ದೊಡ್ಡ ದೊಡ್ಡ ಹಗರಣ ಆಗಿದೆ, ತನಿಖೆ ಮಾಡದೆ ಬಿಲ್ ಕೊಡಿ ಅಂದ್ರೆ ಹೇಗೆ ? ತನಿಖೆ ಮಾಡಿ ಕೊಡ್ತಿವಿ ಅಂತ ಹೇಳಿದ್ದೇವೆ ಎಂದರು.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ; ನೌಕರರಿಗೆ ಸಲಹೆ
ಸರ್ಕಾರಿ ನೌಕರರು ಗಟ್ಟಿಯಾಗಿ ನಿಲ್ತಿರಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸ್ತಿರಾ ಅವಾಗ ಸರ್ಕಾರಕ್ಕೆ ಗೌರವ ಸಿಗುತ್ತೆ. ಜನರಿಗೆ ಕಿರುಕುಳ ಕೊಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಸರ್ಕಾರದ ಯೋಜನೆ ಕಾರ್ಯಕ್ರಮವನ್ನು ಜನರಿಗೆ ತಲುಪಿಸಿ ಎಂದು ಸಚಿವರು ಸಲಹೆ ನೀಡಿದರು.
ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ನೌಕರರು ನನ್ನ ಜೊತೆ ಸಂಬಂದಿಗಳಾಗಿದ್ದಿರಿ. ನಿಮ್ಮ ಜೊತೆ ನಾನು ಇರುತ್ತೇನೆ ನಿಮ್ಮ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಮಾಡ್ತೇವೆ. ಕಳೆದ ಸರ್ಕಾರದ ಕೆಲಸಗಳು ಇನ್ನು ಹಾಗಿಲ್ಲ ,ಅದು ಬದಲಾವಣೆಯಾಗಬೇಕು. ನಿಮ್ಮ ತಪ್ಪನ್ನು ನೀವೆ ಸರಿಪಡಿಸಿಕೊಳ್ಳಿ. ನಿಮಗೆ ನನ್ನ ಗೌರವ ತಲುಪುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರ ಒಳ್ಳೆಯ ಕೆಲಸ ಮಾಡಿ. ನಿಮ್ಮ ಮೇಲೆ ಪ್ರೀತಿ ಗೌರವ ಇಟ್ಟಿದ್ದೇನೆ ಎಂದರು.
ನಿಮ್ಮ ಬೇಡಿಕೆಗಳನ್ನ ನಾವು ಆದಷ್ಟೂ ಬೇಗ ಈಡೇರಿಸುತ್ತೇವೆ. ಪರಿಹಾರ ಹುಡುಕಿ ಕೆಲಸ ಮಾಡ್ತೇವೆ.
ಸಾರ್ವಜನಿಕರ ಕಣ್ಣಲ್ಲಿ ನೀರು ಹಾಕಿಸಬೇಡಿ. ಒಳ್ಳೆಯ ಕೆಲಸ ಮಾಡಿ ಎಂದು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಮರಿತಿಬ್ಬೇಗೌಡ, ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು.