Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಹುಲ್ಲಿನ ಮೆದೆಗಳು ಭಸ್ಮ: ₹80 ಸಾವಿರ ನಷ್ಟ

ಮಂಡ್ಯ ತಾಲೂಕಿನ ಹೆಬ್ಬಕವಾಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಎರಡು ಹುಲ್ಲಿನ ಮೆದೆಗಳು ಹೊತ್ತಿ ಉರಿದು ಭಸ್ಮಗೊಂಡಿವೆ.

ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ಲೇಟ್ ಓಗಿಗೌಡರ ಮಲ್ಲೇಗೌಡ ಮಲ್ಲೇಶ ಅವರಿಗೆ ಸೇರಿದ ಮೆದೆಗಳು ಭಸ್ಮಗೊಂಡು ಸುಮಾರು ₹80 ಸಾವಿರ ರೂ. ನಷ್ಟ ಉಂಟಾಗಿದೆ.

ಗ್ರಾಮದ ಸುತ್ತುಕಟ್ಟೆ ಹತ್ತಿರದ ತೋಟದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ 11 ಕೆ.ವಿ ಹಾಗೂ ಸೆಕೆಂಡರಿ ವಿದ್ಯುತ್ ಲೈನ್ ನನ್ನು ಅಳವಡಿಸಲಾಗಿತ್ತು. ಇಂದು (ಮಾ.1) ಬೆಳಿಗ್ಗೆ ಸುಮಾರು 8.30ರಿಂದ 9 ಗಂಟೆಯ ಸಮಯದಲ್ಲಿ ತೆಂಗಿನ ಮರದ ಗರಿಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ, ಬೆಂಕಿಯ ಕಿಡಿಗಳು ಭೂಮಿಗೆ ಬಿದ್ದ ಕಾರಣ ಹುಲ್ಲಿನ ಮೆದೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬೆಂಕಿ ಅವಘಡದಲ್ಲಿ ಸುಮಾರು 3.5 ಎಕರೆಯಲ್ಲಿ ಬೆಳೆದ ಭತ್ತದ ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿದೆ. ಬೆಂಕಿ ಹತ್ತಿಕೊಂಡ ಕ್ಷಣದಲ್ಲೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿಲಾಗಿ, ಅವರು ಕೂಡಲೇ ಧಾವಿಸಿದ್ದರಿಂದ ಅಕ್ಕ ಪಕ್ಕದ ಹುಲ್ಲಿಗೆ ಮೆದೆಗಳಿಗೆ ಬೆಂಕಿ ಹರಡುವುದು ತಪ್ಪಿದಂತಾಗಿದೆ. ಈ ಘಟನೆಯಲ್ಲಿ 4 ತೆಂಗಿನ ಮರಗಳಿಗೆ ಬೆಂಕಿ ತಗುಲಿ ಹಾನಿಯುಂಟಾಗಿದೆ. ಜಾನುವಾರುಗಳಿಗೆ ಮೀಸಲಿಟ್ಟ ಭತ್ತದ ಹುಲ್ಲು ಬೆಂಕಿಗಾಹುತಿಯಾಗಿದ್ದು, ಸೆಸ್ಕ್ ಅಧಿಕಾರಿಗಳು ಪರಿಹಾರ ನೀಡಬೇಕೆಂದು ಮಲ್ಲೇಶ್ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!