Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೇ.10 EWS ಮೀಸಲಾತಿಗೆ ಅಸ್ತು : ತುಲನಾತ್ಮಕ ವಿಮರ್ಶೆಯಲ್ಲಿ ಸುಪ್ರಿಂಕೋರ್ಟ್ ಸೋತಿದೆ

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ನೀಡಿರುವ ಶೇ.10ರ ಮೀಸಲಾತಿಯನ್ನು ಸುಪ್ರಿಂಕೋರ್ಟ್ ತುಲನಾತ್ಮಕವಾಗಿ ವಿಮರ್ಶೆ ಮಾಡಲು ಸೋತಿದೆ ಎಂದು ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನುಡಿ ಕರ್ನಾಟಕ.ಕಾಮ್ ಗೆ ಪ್ರತಿಕ್ರಿಸಿದ ಅವರು, ಸಾವಿರಾರು ವರ್ಷಗಳಿಂದ ಶಿಕ್ಷಣವನ್ನು ಬಲ್ಲ ಮೇಲ್ವರ್ಗದವರು ಇಂದಿಗೂ ಉನ್ನತ ಶ್ರೇಣಿಯಲ್ಲೇ ಇದ್ದಾರೆ, ಆದರೆ ಕೆಳವರ್ಗದ ಜನರಿಗೆ ಸ್ವತಂತ್ರ ಬಂದ ನಂತರ ಮೀಸಲಾತಿ ಜಾರಿ ಮಾಡಲಾಗಿದೆ, ಈ ತೀರ್ಪು ಗಮನಿಸಿದರೆ ನ್ಯಾಯಾಂಗದ ಮೇಲೆ ಪ್ರಭುತ್ವದ ಕರಿನೆರಳು ಬಿದ್ದಿರುವುದು ಎದ್ದು ಕಾಣುತ್ತದೆ ಎಂದರು.

ಉದಾಹರಣೆಗೆ ಎಸ್ಸಿ, ಎಸ್ಟಿಗಳಲ್ಲಿ 160ಕ್ಕೂ ಹೆಚ್ಚು ಜಾತಿಗಳಿವೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.21ರಷ್ಟು, ಆದರೆ ಇವರಿಗೆ ನೀಡುತ್ತಿರುವ ಮೀಸಲಾತಿ ಶೇ.18 ಮಾತ್ರ. ಆದರೆ ಕರ್ನಾಟಕದಲ್ಲಿ ಶೇ.2ರಷ್ಟು ಬ್ರಾಹ್ಮಣರಿದ್ದಾರೆ, ಆದರೆ ಅವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದು ಎಷ್ಟು ಸರಿ ? ಇದು ಸಾಮಾಜಿಕ ನ್ಯಾಯವೇ ? ಎಂದು ಪ್ರಶ್ನಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಈ ತೀರ್ಪನ್ನು ದೇಶದ ಜನರು ಓಟಿನ ಮೂಲಕ ತಿರಸ್ಕರಿಸಬೇಕಾಗಿದೆ, ಇಲ್ಲವಾದರೆ ಸಂವಿಧಾನದ ಬದಲು ಮನುಸ್ಮೃತಿ ಜಾರಿಯಾವುದುದನ್ನು ನಾವು ಅನಿವಾರ್ಯವಾಗಿ ನೋಡಬೇಕಾಗುತ್ತದೆ.

ಲಿಂಗಾಯಿತರು-ಒಕ್ಕಲಿಗರು ಸುಮ್ಮನಿದ್ದಾರೆ 

ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ಲಿಂಗಾಯಿತರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರಿಗೆ ನೀಡುತ್ತಿರುವ ಮೀಸಲಾತಿ ಶೇ.7ರಷ್ಟು ಮಾತ್ರ. ಆದರೆ ಅವರು ಸುಮ್ಮನಿದ್ದಾರೆ. ಮೀಸಲಾತಿಯನ್ನು ಜಾತಿವಾರು ಜನಸಂಖ್ಯೆ ಆಧರಿಸಿ ಹಂಚಿಬಿಡುವುದು ಸೂಕ್ತವೇನೋ ಎನಿಸಿಬಿಡುತ್ತದೆ ಎಂದು ಅವರು ಪ್ರತಿಕ್ರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!