Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಣ್ಣಿನ ಶಸ್ತ್ರಚಿಕಿತ್ಸೆ : ಆರೋಗ್ಯ ವಿಚಾರಿಸಿದ ಅಶೋಕ್ ಜಯರಾಮ್

ಎಸ್. ಡಿ.ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ, ಕಳೆದ ಕೆಲವು ವಾರಗಳಿಂದ‌ ನಡೆಯುತ್ತಿರುವ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 15 ಮಂದಿ ಫಲಾನುಭವಿಗಳ ಆರೋಗ್ಯವನ್ನು ಬಿಜೆಪಿ ನಾಯಕ ಅಶೋಕ್ ಜಯರಾಮ್ ವಿಚಾರಿಸಿದರು.

nudikarnataka.com

ಆರೋಗ್ಯ ಶಿಬಿರದ ಸಂದರ್ಭದಲ್ಲಿ 15 ಮಂದಿಗೆ ಕಣ್ಣಿನಲ್ಲಿ ಪೊರೆ ಬಂದಿದ್ದು,ಅವರನ್ನೆಲ್ಲ 14/12/2022 ರಂದು ಕೆಂಪೇಗೌಡ ಆಸ್ಪತ್ರೆಗೆ ಉಚಿತ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿತ್ತು.ಅವರಿಗೆ ನಿನ್ನೆಯ ದಿನ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿದಿದ್ದು, ಅಶೋಕ್ ಜಯರಾಂ ಎಲ್ಲರನ್ನೂ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಹಣ್ಣು-ಹಂಪಲನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಕೃಷ್ಣ ಅವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!