Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತ ಫಲಾನುಭವಿಗಳಿಗೆ ರಾಸುಗಳ ವಿಮೆ ಚೆಕ್ ವಿತರಣೆ

ನಾಗಮಂಗಲ ತಾಲೂಕಿನ ರೈತ ಫಲಾನುಭವಿಗಳಿಗೆ ರಾಸುಗಳ ವಿಮೆ ಚೆಕ್ ಅನ್ನು
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನಿರ್ದೇಶಕ ನೆಲ್ಲಿಗೆರೆ ಬಾಲು ವಿತರಣೆ ಮಾಡಿದರು.

ಅವರಿಂದು ತಾಲೂಕಿನ ಹಾಲು ಉತ್ಪಾದಕರ ಉಪ ಕೇಂದ್ರದಲ್ಲಿ ಮೃತಪಟ್ಟ ರಾಸುಗಳ ಫಲಾನುಭವಿಗಳಿಗೆ ವಿಮಾ ಯೋಜನೆಯಡಿ ಚೆಕ್ಕುಗಳನ್ನ ವಿತರಿಸಿದರು.

ನಾಗಮಂಗಲ ತಾಲೂಕಿನಲ್ಲಿ ಸುಮಾರು 54 ರೈತ ಫಲಾನುಭವಿಗಳಿಗೆ 23 ಲಕ್ಷ ರೂ.ರಾಸುಗಳ ವಿಮಾ ಯೋಜನೆ ಚೆಕ್ಕುಗಳನ್ನ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು, ಫಲಾನುಭವಿಗಳು ಹಾಜರಿದ್ದು ಇಲಾಖೆ ಸಿಬ್ಬಂದಿಗಳಾದ ರಮೇಶ್, ಲೀಲಾವತಿ, ಹರೀಶ್, ಶ್ರೀಕಾಂತ್ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!