Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದ ರೋಹಿತ್ ಗೆ ಆರ್ಥಿಕ ಸಹಾಯ

ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದ ರೋಹಿತ್ ಎಂಬ ಯುವಕನಿಗೆ ಖ್ಯಾತ ಉದ್ಯಮಿ, ಚಿರಾಗ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಪಿ.ಲೋಕೇಶ್ ಆರ್ಥಿಕ ಸಹಾಯ ನೀಡಿದರು.

ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜು ಮಾತನಾಡಿ, ಉಳ್ಳವರು ಅನಾರೋಗ್ಯದಿಂದ ಬಳಲುವ ದುರ್ಬಲರಿಗೆ, ಬಡವರಿಗೆ, ನೊಂದ ಜೀವಗಳಿಗೆ ಅಂಗವಿಕಲರಿಗೆ ಸಹಾಯಹಸ್ತ ಚಾಚುವ ಮಾನವೀಯತೆ ಬೆಳೆಸಿಕೊಳ್ಳಬೇಕು. ಅಷ್ಟೇ ಅಲ್ಲದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕೆಂದರು.

ಕೆ.ಆರ್.ಪೇಟೆ ತಾಲ್ಲೂಕಿನ ಮಡವಿನಕೋಡಿ ಗ್ರಾಮದ ಎಂ ಪಿ ಲೋಕೇಶ್ ಅವರು ಒಂದಲ್ಲ, ಒಂದು ರೀತಿಯಲ್ಲಿ ಜನರಿಗೆ ಕೈಲಾದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ, ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಶಶಿಧರ್ ಸಂಗಾಪುರ, ಡಾ ಎಂ ಪಿ ಲೋಕೇಶ್, ಬಸ್ ಕೃಷ್ಣೇಗೌಡ, ತಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!