ಟೆಂಡರ್ ಕಮಿಷನ್ ವಿಚಾರವಾಗಿ ತಾವು ಆಣೆ -ಪ್ರಮಾಣ ಮಾಡಲು ಸಿದ್ದ ಎಂದು ಸ್ಪಷ್ಟಪಡಿಸಿದರುವ ಸಂಸದೆ ಸುಮಲತಾ ಅಂಬರೀಶ್, ಈ ಬಗ್ಗೆ ಜಿಲ್ಲೆಯ ಜೆಡಿಎಸ್ ಶಾಸಕರು ಆಣೆ ಪ್ರಮಾಣ ಮಾಡಲು ಆಗಮಿಸಲಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಮಂಡ್ಯ ಸಮೀಪದ ಬೂದನೂರು ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಿಂದ ಉಂಟಾಗಿರುವ ಅನಾಹುತಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ ಶಾಸಕರು ತಮ್ಮ ಸಮಯ ತಿಳಿಸಿದರೆ ಸಾಕು. ನಾನು ಅಷ್ಟೊತ್ತಿಗೆ ಮೇಲುಕೋಟೆಗೆ ಬರುತ್ತೇನೆ. ಎಲ್ಲ ಜೆಡಿಎಸ್ ಶಾಸಕರೂ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ ಅವರು,ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡೋದಕ್ಕೆ ತಾವು ಸಿದ್ದ ಎಂದು ಸಂದೇಶ ನೀಡಿದರು.