Thursday, September 19, 2024

ಪ್ರಾಯೋಗಿಕ ಆವೃತ್ತಿ

ಪರಿಶಿಷ್ಟರಿಗೆ ಮೀಸಲು ಪ್ರಮಾಣ ಹೆಚ್ಚಿಸಲು ಬಿಜೆಪಿ ದಿಟ್ಟ ಹೆಜ್ಜೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲು ಪ್ರಮಾಣ ಹೆಚ್ಚಿಸುವ ದಿಟ್ಟ ಹೆಜ್ಜೆಯನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಮ್ ತಿಳಿಸಿದರು.

ಮಂಡ್ಯನಗರದ ಸುಭಾಷ್ ನಗರದ ಹುಚ್ಚಮ್ಮ ದೇವಾಲಯ ಆವರಣದಲ್ಲಿ ಜನ ಸಂಕಲ್ಪ ಯಾತ್ರೆಯ ಪ್ರಚಾರ ಅಭಿಯಾನದಲ್ಲಿ ಮಾತನಾಡಿದ ಅವರು, ಮೀಸಲು ಪ್ರಮಾಣ ಹೆಚ್ಚಳ ಮಾಡಲು ವಿಧಾನಮಂಡಲದಲ್ಲಿ ಅಂಗೀಕಾರ ಪಡೆಯಲಾಗಿದ್ದು, ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ, ಇದರಿಂದ ಮುಂದಿನ ದಿನಗಳಲ್ಲಿ ಪರಿಶಿಷ್ಟರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ರಾಜಕೀಯ ಚಾಣಾಕ್ಷ ಪ್ರಸಿದ್ಧಿಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಬರುತ್ತಿದ್ದು, ಜಿಲ್ಲೆಯಲ್ಲಿ ರಾಜಕೀಯ ಹೊಸ ಶಕೆ ಆರಂಭವಾಗಲಿದೆ. ದೇಶ ಮತ್ತು ರಾಜ್ಯ ಪ್ರಗತಿ ಕಂಡಂತೆ ಮಂಡ್ಯದಲ್ಲಿಯೂ ಪ್ರಗತಿಯ ಹೆಜ್ಜೆಗೆ ನಾಂದಿಯಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ – ಗೃಹ ಸಚಿವ ಅಮಿತ್ ಶಾ, ರಾಮ ಮತ್ತು ಲಕ್ಷ್ಮಣರಿದ್ದಂತೆ, ಇವರ ಶ್ರಮದಿಂದ ಬಿಜೆಪಿ ಪಕ್ಷ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದಲ್ಲಿ ಸಾಗಿದೆ. ರಾಜ್ಯದಲ್ಲಿಯೂ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆ ಮುಂದಾಗಬೇಕು. ಅಮಿತ್ ಶಾ ಭಾಗವಹಿಸುತ್ತಿರುವ ಜನ ಸಂಕಲ್ಪ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು

ಬಿಜೆಪಿ ನಗರ ಘಟಕ ಅಧ್ಯಕ್ಷ ವಿವೇಕ್, ನಗರಸಭೆ ಸದಸ್ಯ ಶಿವಲಿಂಗಯ್ಯ,ನಗರಸಭೆ ಮಾಜಿ ಸದಸ್ಯ ಎಂ ಎನ್ ಚೆಲುವರಾಜು, ಹುಚ್ಚಮ್ಮ ದೇವಾಲಯ ಸಮಿತಿಯ ಎಂ.ಪಿ ಶಿವರಾಮಮೂರ್ತಿ, ಎಂ ಬಿ ಶಿವಶಂಕರ್. ಪುಟ್ಟಸ್ವಾಮಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!