ನಗರಸಭೆ ಮಾಜಿ ಸದಸ್ಯ ಕೆ ಟಿ ಮಧುಸೂದನ್ ಅವರು ತಮ್ಮ ಹುಟ್ಟುಹಬ್ಬದಂದು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಸದಸ್ಯ ಪೂರ್ಣಿಮಾ ಹೇಳಿದರು.
ಮಂಡ್ಯನಗರದ ಶಂಕರಪುರದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆ ಟಿ ಮಧುಸೂದನ್ ಗೆಳೆಯರ ಬಳಗ ಹಾಗೂ ಜೀವಧಾರೆ ಟ್ರಸ್ಟ್ ರಕ್ತ ನಿಧಿ ಕೇಂದ್ರದ ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಭ್ರಮಾಚರಣೆ ಮಾಡುವುದು ಸಾಮಾನ್ಯ, ಆದರೆ ಸಮಾಜಕ್ಕೆ ಕೊಡುಗೆ ನೀಡುವಂತಹ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ, ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ಹಲವಾರು ಜೀವಗಳು ಬಲಿಯಾಗುತ್ತವೆ, ಇಂತಹ ಶಿಬಿರಗಳ ಮೂಲಕ ರಕ್ತದಾನ ಮಾಡಿ ಜೀವಗಳ ಉಳಿಸುವ ಕೆಲಸವಾಗಬೇಕು ಎಂದರು.
ಜೀವಧಾರೆ ಟ್ರಸ್ಟ್ ನ ಅಧ್ಯಕ್ಷ ನಟರಾಜ್ ಮಾತನಾಡಿ, ಹಲವರು ಹುಟ್ಟುಹಬ್ಬದ ಮುಖಾಂತರ ರಕ್ತದಾನ ಮಾಡುತ್ತಿರುವುದರಿಂದ ರಕ್ತದ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸುತಿದ್ದೇವೆ, 18 ವರ್ಷ ಆದವರು ಮತದಾನದ ಗುರುತಿನ ಚೀಟಿ ಮಾಡಿಸುವ ಹಾಗೆಯೇ ರಕ್ತದಾನಕ್ಕೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಾನು, ಆಸಿಫ್, ಇಮ್ರಾನ್, ಸಂತೋಷ್, ಚೇತನ್, ನಿಖಿಲ್, ಪುನೀತ್, ದೀಕ್ಷಿತ್, ಅಪ್ಪು ತನ್ಮಯ್ ಮತ್ತಿತರರಿದ್ದರು.